ನಟನಂ ಬಾಲ್ಯ ನಾಟ್ಯ ಕೇಂದ್ರದ ಪ್ರತಿಭೆಗಳಿಗೆ ಶಾಸಕ ಚನ್ನಬಸಪ್ಪ ಸನ್ಮಾನ…

ಥೈಲ್ಯಾಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಶಿವಮೊಗ್ಗ ನಗರದ ನಟನಂ ಬಾಲ ನಾಟ್ಯ ಕೇಂದ್ರದ ಕಲಾಶ್ರೀ ವಿದ್ವಾನ್ ಎಸ್ ಕೇಶವಕುಮಾರ್ ಅವರ ಶಿಷ್ಯ ವೃಂದ ಭಾಗವಹಿಸಿ, ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ನಗರಕ್ಕೆ ಆಗಮಿಸಿದ ಕಲಾವಿದರ ತಂಡವನ್ನು ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ರೈಲ್ವೆ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದರು.

ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ,
14 ವರ್ಷದೊಳಗಿನ ವಿಭಾಗ- ಜೂನಿಯರ್ ಸಮೂಹ ನೃತ್ಯ ಭರತನಾಟ್ಯ
1) ಭರತನಾಟ್ಯದಲ್ಲಿ ಪ್ರಥಮ ಸ್ಥಾನ
2) ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ

14 ವರ್ಷ ಮೇಲ್ಪಟ್ಟ ವಿಭಾಗ- ಹಿರಿಯ ಸಮೂಹ ನೃತ್ಯ ಭರತನಾಟ್ಯ
1) ಭರತನಾಟ್ಯದಲ್ಲಿ 1, 2 ಮತ್ತು 3ನೇ ಸ್ಥಾನ
2) ಜಾನಪದ ನೃತ್ಯದಲ್ಲಿ 2 ತಂಡಕ್ಕೆ – 1 ನೇ ಸ್ಥಾನ
3) ಜಾನಪದ ನೃತ್ಯದಲ್ಲಿ 2 ನೇ ಸ್ಥಾನ

14 ವರ್ಷದೊಳಗಿನವರ ವಿಭಾಗ- ಜೂನಿಯರ್ ಸಮೂಹ ನೃತ್ಯ ಮೋಹಿನಿಯಾಟ್ಟಂ
1) ಮೋಹಿನಿಯಾಟ್ಟಂನಲ್ಲಿ 2 ನೇ ಸ್ಥಾನ
2) ಫ್ಯೂಷನ್ ನೃತ್ಯದಲ್ಲಿ 1 ನೇ ಸ್ಥಾನ

14 ವರ್ಷ ಮೇಲ್ಪಟ್ಟ ವಿಭಾಗ- ಹಿರಿಯ ಸಮೂಹ ನೃತ್ಯ ಮೋಹಿನಿಯಾಟ್ಟಂ
1) ಮೋಹಿನಿಯಾಟ್ಟಂನಲ್ಲಿ 1 ನೇ ಸ್ಥಾನ
2) ಫ್ಯೂಷನ್ ನೃತ್ಯದಲ್ಲಿ 2 ನೇ ಸ್ಥಾನವನ್ನು ಗಳಿಸಿರುತ್ತಾರೆ.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *