ಶಿವಮೊಗ್ಗ ಅದ್ಧೂರಿ ದಸರಾದ ನಾಲ್ಕನೇ ದಿನವಾದ ಭಾನುವಾರ ಕುವೆಂಪು ರಂಗ ಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ಯೋಗ ದಸರಾ ನಡೆದಿದೆ.

ಯೋಗ ದಸರಾದಲ್ಲಿ ಪಾಲಿಕೆ ಆಯುಕ್ತರು ಕವಿತಾ ಯುಗಪ್ಪನವರು ಶಾಸಕ ಚೆನ್ನಬಸಪ್ಪ ಭಾಗಿಯಾಗಿದ್ದರು. ಹಿರಿಯ ವೈದ್ಯರಾದ ಡಾ.ಎನ್ ಎಲ್ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಕಪಾಲ್ಭಾರತಿ, ಸೂರ್ಯನಮಸ್ಕಾರ ವಿವಿಧ ಭಂಗಿಗಳನ್ನ ಮಾಡುವ ಮೂಲಕ ಯೋಗ ದಸರಾ ನಡೆಯಿತು.

ನಂತರ ಪರಿಸರ ದಸರಾ ಅಂಗವಾಗಿ ಸೈಕಲ್ ಥಾನ್ ನಡೆದಿದೆ. ನೆಹರೂ ಕ್ರೀಡಾಂಗಣದಿಂದ ಪ್ರಾರಂಭಗೊಂಡ ಸೈಕಲ್ ಥಾನ್ ರಾಷ್ಟ್ರಪ್ರಶಸ್ತಿ ಪುರಸ್ಕೃತ, ಪರಿಸರ ತಜ್ಞರಾದ ಮಹಾದೇವ ಸ್ವಾಮಿ ಸೈಕಲ್ ಥಾನ್ ಗೆ ಚಾಲನೆ ನೀಡಿದ್ದಾರೆ. ಶಾಸಕರು, ಉಪನ್ಯಾಸಕ ಪರಿಸರ ನಾಗರಾಜ್ ಸೇರಿ 150 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.

ನೆಹರೂ ಕ್ರೀಡಾಂಗಣದಿಂದ ಪ್ರಾರಂಭವಾಗಿ ಉಷಾ ನರ್ಸಿಂಗ್ ಹೋಮ್ ವೃತ್ತ, ವಿನೋಬ ನಗರ ಚೌಕಿ, ಆಲ್ಕೊಳ ವೃತ್ತ, ಸಾಗರ ರಸ್ತೆ, ಬಸ್ ನಿಲ್ದಾಣ, ಬಿಹೆಚ್ ರಸ್ತೆ, ಕರ್ನಾಟಕ ಸಂಘ, ವೀರಭದ್ರ ಚಲನಚಿತ್ರ ಮಂದಿರ ವೃತ್ತದ ಮೂಲಕ ಪಾಲಿಕೆಗೆ ಸೈಕಲ್ಥಾನ್ ಮುಕ್ತಾಯಗೊಂಡಿತು.

ವರದಿ ಪ್ರಜಾ ಶಕ್ತಿ

Leave a Reply

Your email address will not be published. Required fields are marked *