ಶಿವಮೊಗ್ಗ ನಗರದ ಪತಂಜಲಿ ಯೋಗ ಮತ್ತು ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸೇರಿದ್ದ ಶಿವಮೊಗ್ಗ ಜಿಲ್ಲಾ ವಿತರಕರೆಲ್ಲರೂ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟಕ್ಕೆ ಬೆಂಬಲ ಸೂಚಿಸಿದ್ದು ಶಿವಮೊಗ್ಗ ಜಿಲ್ಲಾ ಘಟಕವನ್ನು ಆಯ್ಕೆ ಮಾಡಲಾಯಿತು.

ಸರ್ವಾನುಮತದಿಂದ ಆಯ್ಕೆಯಾದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಘಟಕದ ಆಡಳಿತ ಮಂಡಳಿಯ ವಿವರ ಈ ಮುಂದಿನಂತಿದೆ
ಗೌರವಾಧ್ಯಕ್ಷರು:ಪರಮೇಶ್ವರಪ್ಪ ಎಸ್
ಅಧ್ಯಕ್ಷರು:ಮಾಲತೇಶ್
ಉಪಾಧ್ಯಕ್ಷರು:ರಾಮು ಜಿ
ಉಪಾಧ್ಯಕ್ಷರು:ನಾಗಭೂಷಣ್
ಪ್ರಧಾನ ಕಾರ್ಯದರ್ಶಿ:ಮುಖ್ತಾರ್ ಅಹಮದ್
ಕಾರ್ಯದರ್ಶಿ:ವಿನಯ್ ಕುಮಾರ್
ಖಜಾಂಚಿ:ವಶಿಕ ಉಲ್ಲಾ
ನಿರ್ದೇಶಕರುಗಳು:ಎಸ್ ಎಲ್ ಚಂದ್ರಶೇಖರ್, ಮಾರುತಿ ಸಿ ಎಸ್ ,ಚಂದ್ರಶೇಖರ್ ಎಲ್ ,ಮಾರುತಿ ಸಿ,ಪರುಶುರಾಮ,ಗಂಗಾಧರ್, ಚಂದ್ರು, ಅಶ್ರಫ್, ಸಂತೋಷ್, ಹರ್ಷ ಎಸ್ ಆರ್ ,ಪ್ರವೀಣ್ ಕುಮಾರ್, ರಾಘವೇಂದ್ರ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಶಂಭುಲಿಂಗ ಕೆ ,ಪ್ರದಾನ ಕಾರ್ಯದರ್ಶಿ ಸಂಗಂ ಸುರೇಶ್, ಅರಕೆರೆ ನಾರಾಯಣ ಸ್ವಾಮಿ, ತುಮಕೂರು ಜಿಲ್ಲಾ ದಿನಪತ್ರಿಕೆ ಹಂಚಿಕೆದಾರರ ಸಂಘ ದ ಅಧ್ಯಕ್ಷ ಚಲುವರಾಜು, ಕಾರ್ಯದರ್ಶಿ ವಾಸುದೇವ ಎನ್, ಖಜಾಂಚಿ ಆನಂದ್ ಜೈನ್ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…