2016-18 ರಲ್ಲಿ ಭದ್ರಾ ಡ್ಯಾಂ ಅನ್ನು 7ಕೋಟಿ ವೆಚ್ಚದಲ್ಲಿ ಮಾಡಲಾಯಿತು ನಂತರ 2016 ರಲ್ಲಿ ಡ್ಯಾಮನ್ನು ರಿಪೇರಿ ಮಾಡುವಲ್ಲಿ ಒತ್ತಾಯ ಬಂದಂತಹ ಸಂದರ್ಭದಲ್ಲಿ 2016 ರಿಂದ ಕಾಮಗಾರಿ ಶುರು ಮಾಡಿ 2018 ರಲ್ಲಿ ಕಾಮಗಾರಿ ಸುಮಾರು 7 ಕೋಟಿ ವೆಚ್ಚದಲ್ಲಿ ಮುಕ್ತಾಯಗೊಂಡ ನಂತರ ಒಂದೇ ಸಮನೆ ನೀರನ್ನು ಬಿಟ್ಟಾಗ ಮತ್ತೆ ಡ್ಯಾಮೇಜ್ ಆಗಿತ್ತು ಮತ್ತೆ ರಿಪೇರಿ ಮಾಡಿಸಲು ಕೆ .ಎಸ್ .ಈಶ್ವರಪ್ಪನವರು ತೀರ್ಮಾನ ಮಾಡಿದ್ದಾರೆ. ಈ ಮಧ್ಯೆ 2016 -2018 ರಲ್ಲಿ ಆಗಿದ್ದಂತಹ ಸುಮಾರು 7 ಕೋಟಿ ರೂ ಹಣ ವೆಚ್ಚವು ಕಳಪೆ ಇದೆ ಎಂದು ಕೆಲವರು ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರೈತರ ಸಂಘಟನೆಯೂ ಸಹ ವ್ಯಕ್ತಪಡಿಸಿದ್ದಾರೆ ಇದನ್ನು ಬೆಂಬಲಿಸಿ ಜಿಲ್ಲಾ ಉಸ್ತುವಾರಿ ಸಚಿವನಾದ ನಾನು ನನ್ನ ಕರ್ತವ್ಯ ಎಂದು ಬಂದಿದ್ದೇನೆ ಎಂದು ಕೆ ಎಸ್ ಈಶ್ವರಪ್ಪನವರು ವ್ಯಕ್ತಪಡಿಸಿದ್ದಾರೆ. ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಶಿವಮೊಗ್ಗದ ಬಗ್ಗೆ ಚರ್ಚೆ ಮಾಡಿದ್ದೇನೆ ಹಾಗೂ 3 ಸದಸ್ಯರ ಸಮಿತಿಯ ರಚನೆ ಮಾಡಿದ್ದೇವೆ ಈ ಕಾಮಗಾರಿ 2016-18 ರಲ್ಲಿ ಆಗಿದ್ದಂತಹ ಹೌದೋ ಅಲ್ಲವೋ ಎನ್ನುವುದನ್ನು ವರದಿ ಕೊಡಬೇಕೆಂದು ನೇಮಕ ಮಾಡಿದ್ದೇವೆ ವರದಿ ಕೊಟ್ಟ ನಂತರ ಕಾಮಗಾರಿಯು ಕಳಪೆ ಆಗಿದ್ದಲ್ಲಿ ಅದಕ್ಕೆ ತಪ್ಪಿತಸ್ಥರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಎಸ್ ಈಶ್ವರಪ್ಪನವರು ಹೇಳಿಕೆ ನೀಡಿದ್ದಾರೆ.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153