ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಾಲಾ ಮಕ್ಕಳ ಸುರಕ್ಷತೆ ಮತ್ತು ಸುಗಮ ಸಂಚಾರ ವ್ಯವಸ್ಥೆಯ ಕುರಿತು ಶಿವಮೊಗ್ಗ ನಗರದ ಬಸ್ ವ್ಯವಸ್ಥೆ ಹೊಂದಿರುವ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರ ಸಭೆಯನ್ನು ಆಯೋಜಿಸಿದ್ದು, ಸದರಿ ಸಭೆಯಲ್ಲಿ, ಶ್ರೀ ಸಂಜೀವ್ ಕುಮಾರ್ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಬಿ ಉಪವಿಭಾಗರವರು ಸಭೆಯಲ್ಲಿ ಭಾಗವಹಿಸಿ, ಕಾರ್ಯ ಕ್ರಮದ ಕುರಿತು ಈ ಕೆಳಕಂಡಂತೆ ಮಾತನಾಡಿರುತ್ತಾರೆ.

  1. ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಇರುವ ಸುಪ್ರೀಂ ಕೋರ್ಟ್ ಗೈಡ್ ಲೈನ್ಸ್ ಗಳನ್ನು ಪಾಲನೆ ಮಾಡುವುದು.
  2. ಶಾಲಾ ವಾಹನಕ್ಕೆ ಕಡ್ಡಾಯವಾಗಿ ಸ್ವೀಡ್ ಗರ್ವನರ್ ಅಳವಡಿಸುವುದು.
  3. ಶಾಲಾ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳುವುದು.
  4. ಶಾಲಾ ವಾಹನದ ನಿಗಧಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕೆರೆದುಕೊಂಡು ಹೋಗಬಾರದು.
  5. ಶಾಲಾ ವಾಹನಗಳಿಗೆ ಕನಿಷ್ಠ 4 ವರ್ಷದ ಅನುಭವವುಳ್ಳ ಚಾಲನಾ ಪರವಾನಿಗೆ ಹೊಂದಿರುವ ಚಾಲಕರನ್ನು ನೇಮಕಮಾಡಿಕೊಳ್ಳುವುದು.

6 ಶಾಲಾ ಆಡಳಿತ ಮುಖ್ಯ ಸ್ಥರು ಮತ್ತು ಸಂಚಾರ ಪೊಲೀಸ್ ರವರುಗಳನ್ನ ಒಳಗೊಂಡ ಒಂದು ವಾಟಪ್ಸ್ ಗ್ರೂಪ್ ರಚನೆ ಮಾಡುವ ಬಗ್ಗೆ ಮತ್ತು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ* ಮಾಡುವುದರ ಬಗ್ಗೆ ತಿಳಿಸಿದರು.

ಸದರಿ ಸಭೆಯಲ್ಲಿ, ಶ್ರೀ ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ಶ್ರೀ ತಿರುಮಲೇಶ್ ಪಿಎಸ್ಐ ಪಶ್ಚಿಮ ಸಂಚಾರ ಪೊಲೀಸ್ ಠಾಣೆ , ಶ್ರೀ ನವೀನ್ ಕುಮಾರ್ ಮಠಪತಿ ಪಿಎಸ್ಐ ಮತ್ತು ಶ್ರೀ ಶಿವಣ್ಣನವರ್ ಪಿಎಸ್ಐ ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಉಪಸ್ಥತರಿದ್ದರು.