ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ, ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಪಾಲಿಕೆಯ ಆಯುಕ್ತರಾದ ಮಾಯಣ್ಣ ಗೌಡ ಅವರೊಂದಿಗೆ “ಶಿವಮೊಗ್ಗ ದಸರಾ – 2025” ಕುರಿತು ಸಭೆ ನಡೆಸಿದರು.ದಸರಾ ಉತ್ಸವವನ್ನು ಯಶಸ್ವಿಯಾಗಿ, ಸಾಂಸ್ಕೃತಿಕ ವೈಭವದಿಂದ ಹಾಗೂ ಸಾರ್ವಜನಿಕರ ಹೆಚ್ಚಿನ ಭಾಗವಹಿಸಿಕೊಡುವ ರೀತಿಯಲ್ಲಿ ಆಯೋಜಿಸುವ ಕುರಿತು ಅನೇಕ ವಿಷಯಗಳನ್ನು ಚರ್ಚಿಸಿದರು.

  1. ಹತ್ತು ದಿನಗಳ ಕಾಲ ನಡೆಯಲಿರುವ ಶಿವಮೊಗ್ಗ ದಸರಾ ಉತ್ಸವಕ್ಕಾಗಿ ಸಮಗ್ರ ಸಿದ್ಧತೆಗಳನ್ನು ತಕ್ಷಣದಿಂದ ಆರಂಭಿಸಲು ಸೂಚಿಸಿದರು.
  2. ಉತ್ಸವದ ಸುಗಮ ನಿರ್ವಹಣೆಗೆ ತಾತ್ಕಾಲಿಕ ಸಮಿತಿ ರಚಿಸುವ ನಿರ್ಧಾರ ಕೈಗೊಂಡರು.
  3. ಉತ್ಸವದ ವಿವಿಧ ತಯಾರಿಗಳನ್ನು ನೋಡಿಕೊಳ್ಳಲು ಒಟ್ಟು 14 ಸಮಿತಿಗಳನ್ನು ರಚಿಸಲು ನಿರ್ದೇಶನ ನೀಡಿದರು.
  4. ಅಂಬಾರಿ ಉತ್ಸವ ಕಾರ್ಯಕ್ರಮಕ್ಕಾಗಿ ಅಗತ್ಯ ತಯಾರಿಗಳನ್ನು ಸಮಯಕ್ಕೆ ಮುನ್ನ ಪೂರ್ಣಗೊಳಿಸಲು ಸೂಚಿಸಿದರು.
  5. ಜಂಬೂಸವಾರಿ ಕಾರ್ಯಕ್ರಮಕ್ಕೆ ಆನೆಗಳ ಅನುಮತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
  6. ಉತ್ಸವಕ್ಕೆ ಅಗತ್ಯ ಅನುದಾನವನ್ನು ರಾಜ್ಯ ಸರ್ಕಾರದಿಂದ ತರುವ ಕುರಿತು ಸಮಾಲೋಚನೆ ನಡೆಸಿದರು.
  7. ಸಾರ್ವಜನಿಕರ ಹೆಚ್ಚಿನ ಪಾಲ್ಗೊಳ್ಳುವಿಕೆ, ಪ್ರವಾಸಿಗರ ಆಕರ್ಷಣೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿಧ್ಯತೆ ಮತ್ತು ಭದ್ರತಾ ಕ್ರಮಗಳಿಗೆ ವಿಶೇಷ ಗಮನ ಹರಿಸುವಂತೆ ತಿಳಿಸಿದರು.
  8. ಉತ್ಸವದ ಹತ್ತು ದಿನಗಳ ಅವಧಿಯಲ್ಲಿ ಸಾಂಸ್ಕೃತಿಕ, ಧಾರ್ಮಿಕ, ಕಲಾ ಮತ್ತು ಕ್ರೀಡಾ ಕಾರ್ಯಕ್ರಮಗಳ ಸಮನ್ವಯದೊಂದಿಗೆ, ಎಲ್ಲ ವರ್ಗದ ಜನರಿಗೆ ಆಕರ್ಷಕ ಅನುಭವ ಒದಗಿಸಲು ತೀರ್ಮಾನಿಸಲಾಯಿತು.
  9. ಕಾರ್ಯಕ್ರಮಗಳು ನಡೆಯುವ ಸ್ಥಳಗಳಾದ ಅಂಬೇಡ್ಕರ್ ಭವನ, ಕುವೆಂಪು ರಂಗಮಂದಿರ ಹಾಗೂ ಹಳೆ ಜೈಲು ಆವರಣವನ್ನು ಮುಂಚಿತವಾಗಿ ಕಾಯ್ದಿರಿಸಿ, ದಸರಾ ಉತ್ಸವಕ್ಕೆ ಸಂಪೂರ್ಣವಾಗಿ ಮೀಸಲಿಡುವಂತೆ ಸೂಚಿಸಿದರು.