ಶಿವಮೊಗ್ಗದ ಗೊಂದಿಚಟ್ಟಹಳ್ಳಿ ಗ್ರಾಮದ ಶ್ರೀ ಮಹೇಶ್ವರ ಸಾರ್ವಜನಿಕ ಸಮುದಾಯದ ಭವನದಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರು ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘಟನೆ ಒಕ್ಕೂಟ ಕರ್ನಾಟಕ ಘನ ಸರ್ಕಾರದ ಯೋಜನೆಯಂತೆ ನೊಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರಿಗೆ ಎಲೆಕ್ಟ್ರಾನಿಕ್ ಕಿಟ್ ಹಾಗೂ ಶಾಲಾ ಮಕ್ಕಳ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಸಂಜಯ್ ಕಟ್ಟಡ ಕಾರ್ಮಿಕರ ಸಂಘ, ಜಿ.ವಿರೂಪಾಕ್ಷಪ್ಪ ಮಾಮ್ ಕೋಸ್ ನಿರ್ದೇಶಕರು, ಪ್ರೇಮ ಗ್ರಾ.ಪಂ ಅಧ್ಯಕ್ಷರು ಹನಸವಾಡಿ, ರಂಗಯ್ಯ ಕಾರ್ಮಿಕ‌ ಅಧಿಕಾರಿ, ಹಾಗೂ ‌ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…