ಶಿವಮೊಗ್ಗ: ಒಂದು ಕಡೆ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದ್ದರೆ ಮತ್ತೊಂದು ಕಡೆ ಮತದಾನ ಜಾಗೃತಿ ಕೂಡ ನಡೆಯುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟಿçÃಯ ಶಿಕ್ಷಣ ಸಮಿತಿ, ಕುವೆಂಪು ವಿವಿ, ರಕ್ಷಾ ಸಮುದಾಯ ಪತ್ರಕರ್ತರ ಸಂಘ ಮುಂತಾದ ಅನೇಕ ಸಂಘ ಸಂಸ್ಥೆಗಳು ಪ್ರತ್ಯೇಕವಾಗಿ ಹಲವು ಕಡೆ ಮತದಾನ ಜಾಗೃತಿ ಮೂಡಿಸುತ್ತಿವೆ.


ಮುಖ್ಯವಾಗಿ ಲೈಂಗಿಕ ಅಲ್ಪಸಂಖ್ಯಾತರಿಗೂ ಮತದಾನದ ಜಾಗೃತಿ ಮೂಡಿಸಲಾಗಿದ್ದು, ತಮ್ಮ ಕೀಳರಿಮೆಯಿಂದ ಹೊರಬಂದು ಮತ ಚಲಾಯಿಸುವಂತೆ ಸ್ವೀಪ್ ಅಧಿಕಾರಿಗಳು ಮನವಿ ಮಾಡಿ, ಮತದಾನದ ಮಹತ್ವವನ್ನು ಸಾರಿದ್ದಾರೆ.
ಈ ಸಂದರ್ಭದಲ್ಲಿ ರಕ್ಷಾ ಸಮುದಾಯದ ಮೊಹಮ್ಮದ್ ಸೈಫುಲ್ಲಾ, ಸ್ವೀಪ್ ಸಮಿತಿಯ ಅನುಪಮಾ, ರತ್ನಾಕರ್, ರೇಣು, ಸಮುದಾಯದ ಪ್ಯಾರುದಾ, ಅರ್ಚನಾ ಮುಂತಾದವರಿದ್ದರು.
ಬಸ್ ನಿಲ್ದಾಣದಲ್ಲಿ ಕೂಡ ಸ್ವೀಪ್ ವತಿಯಿಂದ ಸಹಿ ಸಂಗ್ರಹ ಅಭಿಯಾನ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಅಲ್ಲದೇ, ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವರದಿ ಪ್ರಜಾ ಶಕ್ತಿ…