ದೇಶ ನೀಟ್ ಅಕಾಡೆಮಿ ಸಂಸ್ಥೆಯ ಮುಖ್ಯಸ್ಥರಾದ ಅವಿನಾಶ್ ಪತ್ರಿಕಾಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ವರ್ಷದ ನೀಟ್ ಪರೀಕ್ಷೆ ಕಷ್ಟವಾಗಿತ್ತು.ಆದರೆ ಮಕ್ಕಳು ಉತ್ತಮ ಸಾಧನೆ ಮಾಡಿ ಹೆಸರು ತಂದಿದ್ದಾರೆ. ಸೀಟ್ಗಳ ಸಂಖ್ಯೆ ಕಡಿಮೆಯಾಗಿಲ್ಲ. ಗಳಿಸಿರುವ ಅಂಕ ಕಡಿಮೆಯಾಗಿದೆ. ಪೋಷಕರು,ಮಕ್ಕಳು ಸೀಟ್ ಸಿಗುವುದಿಲ್ಲ ಎಂದು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
೨೦೧೭ರಲ್ಲಿ ಈ ಪರೀಕ್ಷೆ ಕಷ್ಟವಾಗಿತ್ತು.ಈಗ ೨೦೨೫ರಲ್ಲಿ ಮತ್ತೆ ಪರೀಕ್ಷೆ ಕಠಿಣ ನೀಡಲಾಗಿತ್ತು. ಇದರಿಂದ ಮಕ್ಕಳು ಪರೀಕ್ಷೆಯಲ್ಲಿ ಆತಂಕಕ್ಕೆ ಒಳಗಾಗಿದ್ದರು. ಕಠಿಣತೆಯ ಮಟ್ಟಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ವೈದ್ಯಕೀಯ ಪ್ರವೇಶಕ್ಕೆ ಅವರನ್ನು ಸಿದ್ದ ಮಾಡಲಾಗುವುದು. ಬಡವರಿಗೆ ಹಾಸ್ಟೆಲ್ ಶುಲ್ಕದಲ್ಲಿ ಶೇ.೫೦ ರಿಯಾಯಿತಿ ನೀಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇಶ್ ನೀಟ್ ಅಕಾಡೆಮಿಯ ವಿಜಯ್ ಕುಮಾರ್ ಪವನ್ ಮುಂತಾದವರು ಉಪಸ್ಥಿತರಿದ್ದರು.