ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೇಂದ್ರ ಪುರಸ್ಕೃತ ಯೋಜನೆಗಳ ಯಶಸ್ವಿ ಅನುಷ್ಟಾನ ಹಾಗೂ ಅನೇಕ ಯೋಜನೆಗಳ ಪ್ರಗತಿಯ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಈ ಕೆಳಕಂಡ ಅಂಶಗಳನ್ನು ಪರಿಶೀಲನೆ ನೆಡೆಸಲಾಯಿತು.
- ರೂ 784.00 ಕೋಟಿ ವೆಚ್ಚದ ಮನೆ ಮನೆ ಶುದ್ಧ ಕುಡಿಯುವ ನೀರಿನ ಯೋಜನೆ.
- PM JANMAN ಯೋಜನೆಯಲ್ಲಿ ರೂ 4.89 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಹಾಗೂ ರೂ 1.80 ಕೋಟಿ ವೆಚ್ಚದಲ್ಲಿ MPC ಹಾಲ್ ಗಳ ನಿರ್ಮಾಣ.
- ರೂ 394.95 ಕೋಟಿ ವೆಚ್ಚದ ಬೈಂದೂರು-ರಾಣೇಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ರಸ್ತೆ.
- ರೂ 170.00 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 66ಯಲ್ಲಿ 4 ಅಂಡರ್ ಪಾಸ್ ನಿರ್ಮಾಣ.
- PM ವಿಶ್ವಕರ್ಮ ಯೋಜನೆ.
- PM ಸೂರ್ಯ ಘರ್, PM ಕುಸುಮ್ ಯೋಜನೆ.
- PM AWAS ನಗರ ಹಾಗೂ ಗ್ರಾಮೀಣ ಯೋಜನೆ.
ಸೇರಿದಂತೆ ಇನ್ನೂ ಅನೇಕ ಯೋಜನೆಗಳ ಬಗ್ಗೆ ವಿಶೇಷವಾಗಿ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಯಿತು.