12/01/2022 ಬುಧವಾರ ಬೆಳಗ್ಗೆ ಶಿವಮೊಗ್ಗ ನಗರದ ಕೋಟೆ ರಸ್ತೆ, ಶ್ರೀ ಅಯ್ಯಪ್ಪ ಆಂಗ್ಲ ಶಾಲೆ ಎದುರು, ಬಿಪಿಓ ಏರಿಯಾ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅಂಗಳದ ಆವರಣವನ್ನು ಪರೋಪಕಾರಂ ತಂಡವು ಸ್ವಚ್ಛತೆ ಮಾಡುತ್ತಾ ನಮ್ಮೂರ ಕನ್ನಡ ಶಾಲೆ ಎಷ್ಟೊಂದು ಚೆಂದ, ಸ್ವಚ್ಛತಾ ಮಾಡೋಣ ಶಾಲೆಯ ಅಂಗಳ ಎನ್ನುತ್ತಾ ಪರೋಪಕಾರಂ ತಂಡದ ಯೋಧರು ಆವರಣದಲ್ಲಿ ಲಡ್ಡಾಗಿ ಬಿದ್ದ ಬೃಹತ್ ಮರವ ಹಾಗೂ ಕಸ ಕಡ್ಡಿಯ ತೆಗೆದು ಆವರಣವನ್ನು ಸ್ವಚ್ಛ ಗೋಳಿಸಿದರು.

ಈ ಸ್ವಚ್ಛತಾ ಕಾರ್ಯದಲ್ಲಿ ಶ್ರೀಧರ್ ಎನ್.ಎಂ. ತ್ಯಾಗರಾಜ್ ಮಿತ್ಯಾಂತ್, ಅನಿಲ್ ಹೆಗ್ಡೆ, ಕಾರ್ಪೆಂಟರ್ ಕುಮಾರಣ್ಣ, ಶ್ರೀ ಮತಿ ಲೀಲಾಬಾಯಿ, ಚನ್ನವೀರಪ್ಪ ಗಾಮನಗಟ್ಟಿ, ಲೋಹಿತ್, ನರಪತ್, ದಿನೇಶ್ ವಿಷ್ಣು, ಬಾಲಕೃಷ್ಣ ಹೆಗ್ಡೆ, ಹಾಗೂ ಇತರರೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.

ವರದಿ ಮಂಜುನಾಥ್ ಶೆಟ್ಟಿ…