ನಿನ್ನೆ ದಿವಸ ರಾತ್ರಿ ತುಂಗಾ ನದಿ ಬಳಿ ಹಳೆ ಸೇತುವೆ ಮೇಲಿನಿಂದ ಹಾರಿದ ವ್ಯಕ್ತಿಯೋರ್ವನನ್ನು ಆಟೋ ಚಾಲಕರ ಸಹಾಯದೊಂದಿಗೆ ರಕ್ಷಿಸಿದ ಪೊಲೀಸ್ ಅಧಿಕಾರಿ ಹಾಗೂ ಆಟೋ ಚಾಲಕರಿಗೆ ಸಾರ್ವಜನಿಕರ ಶ್ಲಾಘನೀಯ.

ಈ ಕರ್ತವ್ಯಕ್ಕಾಗಿ NSUI ವತಿಯಿಂದ ಶಿವಮೊಗ್ಗ ಪೂರ್ವ ಮತ್ತು ಪಶ್ಚಿಮ ಠಾಣೆಯ ಇನ್ಸ್ಪೆಕ್ಟರ್ ರಾದ ಶ್ರೀಯುತ ಸಿದ್ದನಗೌಡ ಮತ್ತು ಪೂರ್ವ ಸಂಚಾರಿ ಪೊಲೀಸ್ ಠಾಣೆ ಶಿವಮೊಗ್ಗ ಸಹಾಯಕ ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ರವರಿಗೆ , ಆಟೋ ಚಾಲಕರಾದ ಅರ್ಜುನ್ ಕಾಂತ ರವರಿಗೂ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಚಿರಂಜೀವಿ ಬಾಬಣ್ಣ, ರಾಜ್ಯ NSUI ಕಾರ್ಯದರ್ಶಿ ಎಚ್.ಎಸ್ ಬಾಲಾಜಿ, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ತಾಂದ್ಲೆ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುಪುರಲೆ, ಯುವ ಮುಖಂಡರುಗಳಾದ , ಅನ್ನು , ಪ್ರಮೋದ್,ಸಂದೀಪ್ ಅಟೋಕ್, ಮಂಜು, ಲಕ್ಷ್ಮಣ್, ಗಿರೀಶ್, ಪದ್ಮನಾಭ್,ಚಂದನ್, ವಿಜಯ್ ಹಾಗೂ ಇನ್ನೂ ಹಲವರು ಭಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…