ಕೆಳದಿ ಚೆನ್ನಮ್ಮ ವಿನೋಬ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಿವಮೊಗ್ಗ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀಮತಿ ಸುನಿತಾ ಅಣ್ಣಪ್ಪ ನವರಿಗೆ
ವಿನೋಬನಗರದ ಕೆಳದಿ ಚೆನ್ನಮ್ಮ ರಸ್ತೆಯ ವಿನ್ಯಾಸ ಟ್ರೇಡರ್ಸ್ ನ ಮುಂಭಾಗದ ಪಾಲಿಕೆ ಜಾಗದಲ್ಲಿ ದಿನನಿತ್ಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು
ಸದರಿ ಜಾಗವನ್ನು ಸಾಕಷ್ಟು ದುರುಪಯೋಗ ಮಾಡಿಕೊಳ್ಳುತ್ತಿದ್ದು ಇದರಿಂದ ನಿವಾಸಿಗಳಿಗೆ ತೊಂದರೆಯಾಗಿದು ಕೂಡಲೇ ಸದರಿ ಜಾಗದಲ್ಲಿ ಫೆನ್ಸಿಂಗ್ ಅನ್ನು ಅಳವಡಿಸಿ ಬೇಕಾಗಿ ವಿನಂತಿ ವಿನಂತಿಸಲಾಯಿತು.

ಶಿವಮೊಗ್ಗ ನಗರದ ಕೆಳದಿ ಚೆನ್ನಮ್ಮ ರಸ್ತೆಯಲ್ಲಿನ ಚಾನೆಲ್ ಸೇತುವೆ ಪಕ್ಕದಲ್ಲಿನ ವಿನ್ಯಾಸ ಟ್ರೇಡರ್ಸ್ ನ ಮುಂಭಾಗದ ಪಾಲಿಕೆ ಜಾಗದಲ್ಲಿ ದಿನನಿತ್ಯ ಮಧ್ಯಾಹ್ನದಿಂದ ಕುಡುಕರ ಹಾವಳಿ ಹೆಚ್ಚಾಗಿದ್ದು ನಿವಾಸಿಗಳ ಮನೆಯ ಮುಂಭಾಗದಲ್ಲಿ ಆಟೋಗಳಲ್ಲಿ ಕುಡಿಯುತ್ತಾ ಕೂರುತ್ತಾರೆ ಹಾಗೂ ಸಂಜೆಯಾಗುತ್ತಿದ್ದಂತೆ ಕುಡಿದು ಕೂಗಾಡುವುದು ಗಲಾಟೆ ಮಾಡುವುದು ಮಾಡುತ್ತಿದ್ದಾರೆ ಇದರಿಂದ ಸಂಜೆ ಹೊತ್ತಿನಲ್ಲಿ ಬಡಾವಣೆ ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟವಾಗಿದು ಮತ್ತು ಕಳೆದ ಕೆಲವು ತಿಂಗಳ ಹಿಂದೆ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಚರಂಡಿಯಲ್ಲಿ ಬಿದ್ದು ಮೃತನಾಗಿದ್ದಾನೆ ಇದರಿಂದ ನಿವಾಸಿಗಳು ನೆಮ್ಮದಿಯ ಬದುಕು ಬಾಳುವುದು ಕಷ್ಟವಾಗಿದೆ ದಯವಿಟ್ಟು ಈ ಕೂಡಲೇ ತಾವು ಸೂಕ್ತ ಕ್ರಮವನ್ನು ತೆಗೆದುಕೊಂಡು
ಸದರಿ ಜಾಗವನ್ನು ಅಭಿವೃದ್ಧಿ ಪಡಿಸುವ ತನಕ ಅಲ್ಲಿ ಫೆನ್ಸಿಂಗ್ ಅನ್ನು ಅಳವಡಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ನಿವಾಸಿಗಳ ಸಂಘದ ಮೂಲಕ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನಿವಾಸಿಗಳ ಸಂಘದ ಗೌರವ ಸಲಹೆಗಾರರಾದ ಶ್ರೀ ಬಲರಾಮ್ ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಮತ್ತು ಸಂಘದ ಹೆಜ್ಜೆ ಹೆಚ್ ಕುಮಾರ್ ಆರ್ ರವಿ ಶ್ರೀಕಾಂತ್ ಗೆ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…