ಮಂಜುನಾಥ್ ಶೆಟ್ಟಿ…
ಮೀನುಗಾರಿಕೆ ಇಲಾಖೆಯ ಇಲ್ಲಾ ಪಂಚಾಯತ್ ಯೋಜನೆಯಡಿ ಜಲಾಶಯ/ ಕೆರೆ ಅಂಚಿನಲ್ಲಿ ಕೊಳ ನಿರ್ಮಾಣ ಮಾಡಿಕೊಂಡು ಮೀನುಮರಿ ಪಾಲನೆಗಾಗಿ ಸಹಾಯಧನ ಪಡೆಯಲು ಅಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋನೆಯಡಿ ಶಿವಮೊಗ್ಗ-0.20, ಭದ್ರಾವತಿ-0.10, ಸಾಗರ-1.60, ಸೊರಬ-0.20 ಮತ್ತು ಶಿಕಾರಿಪುರ – 0.10 ಹೆಕ್ಟರ್ ಇಲಾಖೆಯಿಂದ ಕೆರೆ ಪಡೆದಿರುವ/ ಲೈಸೆನ್ಸ್ ನೀಡಲಾಗಿರುವ ಜಲಾಶಯಗಳಲ್ಲಿ ನಿಯಮಾನುಸಾರ ಹೂಡಿಕೆಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಆಸಕ್ತರು ಜೂ. 16 ರೊಳಗಾಗಿ ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರುಗಳನ್ನು ಸಂಪರ್ಕಿಸಿ ಪೂರ್ಣ ದಾಖಲೆಗಳೊಂದಿಗೆ ಅರ್ಜಿ ನೀಡುವಂತೆ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.