ಶಿವಮೊಗ್ಗ : ಉತ್ತಮ ಅಧ್ಯಯನ ಮತ್ತು ಪುನರ್ ಮನನದೊಂದಿಗೆ ಆತ್ಮವಿಶ್ವಾಸದೊಂದಿಗೆ ಪರೀಕ್ಷೆ ಎದುರಿಸಿ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಹೆಚ್.ಆರ್.ಶಂಕರನಾರಾಯಣ ಶಾಸ್ತ್ರಿ ಅಭಿಪ್ರಾಯಪಟ್ಟರು.

ಇಂದು ಶಿವಮೊಗ್ಗ ರೋಟರಿ ಕ್ಲಬ್ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆ ಎದುರಿಸುವುದು ಹೇಗೆ ವಿಷಯದ ಕುರಿತ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು ಕೆಲವು ವಿಷಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಅನೇಕ ಗೊಂದಲ ಹಾಗೂ ಆತಂಕವಿರುತ್ತದೆ. ಗಣಿತವೆಂಬುದು ನಿವಾರಿಸಲಾಗದ ಸಮಸ್ಯೆ ‌ಎಂಬಂತಹ ಅನಗತ್ಯ ಆತಂಕ ಬೇಡ. ಶ್ರದ್ಧೆ ಹಾಗೂ ಏಕಾಗ್ರತೆಯ ಓದು ಎಂತಹ ಪರೀಕ್ಷೆಯನ್ನು ಎದುರಿಸಬಹುದಾದ ಮನೋಬಲ ನಮಗೆ ನೀಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಕಿಶೋರ್ ಶೀರನಾಳಿ ಅಧ್ಯಕ್ಷತೆ ವಹಿಸಿದ್ದರು. ಇಂಟರ್ಯಾಕ್ಟ್ ಛೇರ್ಮನ್ ಎನ್.ಜಿ.ಉಷಾ, ನಿರ್ದೇಶಕರಾದ ಸೂರ್ಯನಾರಾಯಣ ಉಡುಪ ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲರಾದ ಚಿಕ್ಕ ಪೆಂಚಾಲಯ್ಯ ಸ್ವಾಗತಿಸಿ, ಜಿ.ಪಿ.ನಾಗರಾಜ್ ವಂದಿಸಿದರು.

ವರದಿ ಮಂಜುನಾಥ್ ಶೆಟ್ಟಿ…