ಶಿವಮೊಗ್ಗ ನಗರದಲ್ಲಿ ರೋಗಕ್ಕೆ ಸಂಬಂಧಪಟ್ಟ ಅನೇಕ ರೋಗಿಗಳ ಆಸ್ಪತ್ರೆ ದಾಖಲಾಗಿದ್ದಾರೆ ಇದರಲ್ಲಿ ವಯೋವೃದ್ಧರು , ಅಂಗವಿಕಲರು , ಮಕ್ಕಳು ಇದ್ದಾರೆ ಆದರೆ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ರೋಗಿಗಳ ಜೊತೆಯಲ್ಲಿ ಇದ್ದವರಿಗೆ ರೋಗಿಗಳ ಯೋಗಕ್ಷೇಮ ವಿಚಾರಿಸಲು ಅವರಿಗೆ ಔಷಧ ಉಪಕರಣಗಳನ್ನು ಕೊಡದ ಬಿಡುತ್ತಿಲ್ಲ . ಆಸ್ಪತ್ರೆಗಳಲ್ಲಿ ರೋಗಿಗಳನ್ನು ನೋಡಿಕೊಳ್ಳಲು ನರ್ಸ್ ಗಳ ಕೊರತೆ ಇದೆ . ಡಿ ದರ್ಜೆಯ ನೌಕರರನ್ನು ರೋಗಿಯ ಯೋಗಕ್ಷೇಮ ವಿಚಾರಿಸಲು ನಿಯೋಜಿಸಲಾಗಿದೆ ಐಸಿಯುನಲ್ಲಿ 5 ರೋಗಿಗಳಿಗೆ ಕೇವಲ ಒಬ್ಬರು ನರ್ಸ್ ಗಳು ಇದ್ದಾರೆ ಕನಿಷ್ಟಪಕ್ಷ ಐಸಿಯುನಲ್ಲಿ 2 ರೋಗಿಗೆ ಒಬ್ಬರು ನರ್ಸ್ ಗಳು ರಾಜ್ಯಕ್ಕಾಗಿರುವ ನಿಯಮಾವಳಿಗಳಿವೆ ರಾಜ್ಯಾದ್ಯಂತ ಪತ್ರಿಕಾ ಪ್ರಕಟಣೆಯಲ್ಲಿ ನರ್ಸ್ ಗಳ ಹುದ್ದೆಗೆ ಟೆಂಡರ್ ಅನ್ನು ಕರೆದಿದ್ದಾರೆ ಆದರೂ ಸಹ ಕಡಿಮೆ ಪ್ರಮಾಣದಲ್ಲಿ ಅರ್ಜಿಗಳನ್ನು ಹಾಕಿದ್ದಾರೆ.

ಈಗಾಗಲೇ ವೈದ್ಯರು ಹಾಗೂ ನರ್ಸ್ ಗಳು ಕರೋನ ವಿಚಾರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿರುತ್ತಾರೆ ಕೆಲವರು ಆಯಸ್ಸು ಕೂಡ ಆಗಿದ್ದರೆ ಕರೋನ ರೋಗಿಗಳನ್ನು ಬಹಳಷ್ಟು ಜನ ಮಧುಮೇಹ ಹಾಗೂ ರಕ್ತದೊತ್ತಡ ಕಾಯಿಲೆಗಳಲ್ಲಿ ಸಹ ಬಳಲುತ್ತಿದ್ದಾರೆ ಇವರಿಗೆ ಅವರ ಸಂಬಂಧಿಕರು ಇವರ ಜೊತೆ ಇದ್ದರೆ ರೋಗಿಗಳಿಗೆ ಬಹಳಷ್ಟು ಧೈರ್ಯ ಆದುದರಿಂದ ರೋಗಿಗಳ ಸಂಬಂಧಿಕರು ಬಯಸಿದ್ದಲ್ಲಿ ಕೋವಿಡ ನಾ ನಿಯಮಾವಳಿ ಅಡಿಯಲ್ಲಿ ಅನುವುಮಾಡಿ ಕೊಡಬೇಕೆಂದು ಕೇಳಿಕೊಂಡರು . ಮಾಧ್ಯಮದ ಮುಖಾಂತರ ಸರ್ವೋಚ್ಚ ನ್ಯಾಯಾಲಯವು ಇದರ ಬಗ್ಗೆ ಮತ್ತೊಮ್ಮೆ ಮರು ಪರಿಶೀಲನೆ ಮಾಡಬೇಕಾಗಿ ಕೋವಿಡ ರೋಗಿಗಳ ಸಂಬಂಧಿಕರ ಪರವಾಗಿ ಕೇಳಿಕೊಂಡರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಚ್ ಸಿ ಯೋಗೀಶ್ ನಾಗರಾಜ ಕಂಕರಿ ಮತ್ತು ಭಾಸ್ಕರ್ ಉಪಸ್ಥಿತರಿದ್ದರು…
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153