ಶಿವಮೊಗ್ಗ 24*7 ನೀರು ಬಳಕೆದಾರರಿಗೆ ಅವೈಜ್ಞಾನಿಕ ಶುಲ್ಕ ವಿಧಿಸುತ್ತಿರುವ ಕುರಿತು ನಾಗರಿಕರ ಮತ್ತು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲು ಎರಡು ಬಾರಿ ಮಾನ್ಯ ಶಾಸಕರನ್ನು ವಿನಂತಿಸಲಾಗಿತ್ತು. ಆದಾಗ್ಯೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಆದ್ದರಿಂದ ನಾಳೆ ಬುಧವಾರ 25.05.2022 ರ ಬೆಳಿಗ್ಗೆ 11ಗಂಟೆಗೆ ಶಾಸಕರ ಕಛೇರಿ, ನೆಹರು ರಸ್ತೆ ಇಲ್ಲಿ (ಸ್ಮಾರ್ಟ್ ಸಿಟಿ ಕಛೇರಿ ಪಕ್ಕ) ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ಪ್ರಜ್ಞಾವಂತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರುತ್ತೇವೆ.
*ಕೆ.ವಿ. ವಸಂತ ಕುಮಾರ್*
ಡಾ.ಎ.ಸತೀಶ್ ಕುಮಾರ್ ಶೆಟ್ಟಿ
ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ, ಶಿವಮೊಗ್ಗ
.