ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ರೇಚಿಕೊಪ್ಪ ಗ್ರಾಮದಲ್ಲಿ ರಾಜ್ಯ ಹೆದ್ದಾರಿ 14 ರಿಂದ ಸೇರುವ ಮಾರ್ಗ ಸಿರಿಗೆರೆ, ತಮ್ಮಡಿಹಳ್ಳಿ, ಬಿಲ್ಲುಣಿ, ಆಡಗಡಿ, ಮಂಡಘಟ್ಟ, ದ್ಯಾವಿನಕೆರೆ, ರಾಗಿಹೊಸಹಳ್ಳಿ, ರೇಚಿಕೊಪ್ಪ, ಶೆಟ್ಟಿಕೆರೆ, ಶಾಂತಿಕೆರೆ, ಕೊರಗಿ, ಹೊರಬೈಲು, ತುಪ್ಪುರು, ಬ್ಯಾಡನಾಳ್, ಹಾಗೂ ಮಂಜರಿಕೊಪ್ಪ, ಮಲೇಶಂಕರ ದೇವಸ್ಥಾನ, ಎರೇಬಿಸು, ಕೂಡಿ ಗ್ರಾಮಗಳಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಜಿಲ್ಲಾ ಮುಖ್ಯರಸ್ತೆಯ (ಆಯ್ದ ಭಾಗಗಳಲ್ಲಿ) ರಸ್ತೆ ಅಭಿವೃದ್ಧಿ 13 ಕೋಟಿ ರೂ ವೆಚ್ಚದ ಕಾಮಗಾರಿಯ ಗುದ್ದಲಿ ಪೂಜಾ ಕಾರ್ಯಕ್ರಮವನ್ನು ಸಂಸದರಾದ ಬಿ.ವೈ ರಾಘವೇಂದ್ರ ರವರು ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ನಿಕಟ ಪೂರ್ವ ಸದಸ್ಯರಾದ ನಾಗರಾಜ್, ಪಕ್ಷದ ಮುಖಂಡರುಗಳಾದ ಲಕ್ಷೀಕಾಂತ್ ಶೆಟ್ಟಿ, ಷಣ್ಮುಖಪ್ಪ, ಸಿಂಗಹಳ್ಳಿ ಸುರೇಶ್, ಅರುಣ್, ಲತಾ ನಿರಂಜನ್, ವೀಣಾ ನಾಗರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷರುಗಳಾದ ಪ್ರತಿಭಾ, ಶೋಭಾ,ಹಾಗೂ ಪ್ರಮುಖರು, ಕಾರ್ಯಕರ್ತರುಗಳು, ಗ್ರಾಮಸ್ಥರು, ಉಪಸ್ಥಿತರಿದ್ದರು..

ವರದಿ ಮಂಜುನಾಥ್ ಶೆಟ್ಟಿ…