ಶಿಕಾರಿಪುರ ನ್ಯೂಸ್…

ಶಿಕಾರಿಪುರ : ತಾಲೂಕಿನ ರೈತಾಪಿ ವರ್ಗದವರಿಗೆ ಜೀವನ ಪೂರ್ತಿ ಅನುಕೂಲವಾಗುವ ನೀರಾವರಿ ಯೋಜನೆ,
ಸೇವಾಲಾಲ್ ಮರಿಯಮ್ಮ ಜನ್ಮಸ್ಥಳ, ಶಿವಶರಣೆ ಅಕ್ಕ ಮಹಾದೇವಿ ಜನ್ಮ ಸ್ಥಳ ಅಭಿವೃದ್ಧಿ ಮಾಡಿದ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ 20 ಸಾವಿರ ಕ್ವಿoಟಾಲ್ ಅಕ್ಕಿ ವಿತರಿಸಲಾಗುತ್ತಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಯಾವೊಬ್ಬ ವ್ಯಕ್ತಿಯು ಹಸಿವಿನಿಂದ ಇರಬಾರದು ಎಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ಜಾರಿಗೆ ತಂದು ದೇಶದ ಹಳ್ಳಿ ಹಳ್ಳಿಗೂ ತಲುಪಿಸುತ್ತಿದ್ದಾರೆ.ಶಿವಮೊಗ್ಗ ಜಿಲ್ಲೆಯ 35 ತಾಂಡಾ ಮತ್ತು ಶಿಕಾರಿಪುರ ತಾಲೂಕಿನ 9 ತಾಂಡಾದಲ್ಲಿ ನ್ಯಾಯಬೆಲೆ ಅಂಗಡಿಯ ಉಪ ಕೇಂದ್ರ ಜನತೆಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ ಎಸ್ ಗುರುಮೂರ್ತಿ ಅವರು, ಪಂಚಾಯಿತಿ ಅಧ್ಯಕ್ಷರಾದ ಬಸವರಾಜ್ ನಾಯ್ಕ್,ಈಸೂರು ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ಕೊರಲಹಳ್ಳಿ ನಾಗರಾಜ್,ತಾಂಡಾ ಅಭಿವೃದ್ದಿ ಪ್ರಾಧಿಕಾರದ ಸದಸ್ಯರಾದ ರಮೇಶ್ ನಾಯ್ಕ್, ನಾಗರಾಜ್ ಸ್ವಾಮಿ ರುದ್ರಮುನಿ,ಬೂತ್ ಸಮಿತಿಯ ಅನಿಲ್ ನಾಯ್ಕ್ ಆಹಾರ ಶಿರಸ್ತೆದಾರ್ ಗೀತಾ ಮತ್ತಿತರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…