ಶಿವಮೊಗ್ಗ ಆಮ್ ಆದ್ಮಿ ಪಕ್ಷದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯು ನಿಧಾನ ಗತಿಯಲ್ಲಿ ನಡೆಯುತ್ತಿದ್ದು ಜನಸಾಮಾನ್ಯರ ರಸ್ತೆ ಕಾಮಗಾರಿ ವಿಳಂಬದಿಂದಾಗುತ್ತಿರುವ ಕಾರಣ ಅಪಘಾತಗಳಾಘುತ್ತಿದ್ದು ಜೀವಹಾನಿಯಾಗುತ್ತಿದೆ.

ಇನ್ನು 6 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುವುದರಿಂದ 3 ತಿಂಗಳ ನಂತರ ನೀತಿ ಸಂಹಿತೆ ಕಾನೂನು ಜಾರಿಯಾಗುತ್ತದೆ. ನಂತರ ಯಾವುದೇ ಕಾಮಗಾರಿ ಆಗೋದಿಲ್ಲ.ಆದ್ದರಿಂದ ಕಾಮಗಾರಿಯು ಆದಷ್ಟು ಬೇಗ ಮಾಡಲಿ ಎಂದು ಈ ಮೂಲಕ ಆಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿಏಳುಮಲೈ (ಕೇಬಲ್‌ ಬಾಬು) ಕಿರಣ್ , ಲಕ್ಷ್ಮೀಶ , ಶ್ರೀನಿವಾಸ , ಮುರುಗನ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…