ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಗಸವಳ್ಳಿ ಗ್ರಾಮದಲ್ಲಿ ಮನೆಯ ಬಾಗಿಲನ್ನು ಮುರಿದು ಬಂಗಾರದ ಆಭರಣ ಮತ್ತು ನಗದು ಹಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ನಂತರ ಮನೆಯವರು ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 549/2022 ಕಲಂ 454, 457, 380 ಐಪಿಸಿ ರೀತ್ಯಾ ಮನೆಗಳ್ಳತನ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿರುತ್ತದೆ.

ಸದರಿ ಪ್ರಕರಣದ ತನಿಖೆ ಕೈಗೊಂಡ ಪಿಐ ತುಂಗಾನಗರ ಪೊಲೀಸ್ ಠಾಣೆ, ಪಿಎಸ್ಐ ಮತ್ತು ಸಿಬ್ಬಂಧಿಗಳ ತಂಡವು ದಿನಾಂಕಃ- 10-12-2022 ರಂದು ಪ್ರಕರಣದ ಆರೋಪಿತರಾದ 1) ಮಂಜುನಾಥ ಜೆ @ ಜಂಗ್ಲಿ ಮಂಜ, 31 ವರ್ಷ, ಕಾಳಿಕಾನಗರ ಹೊಳೆಹೊನ್ನೂರು, 2) ಅರುಣ್ ಆರ್, 18 ವರ್ಷ, ಕಾಳಿಕಾನಗರ ಹೊಳೆಹೊನ್ನೂರು, 3) ಅಶೊಕ, 19 ವರ್ಷ, ಜಾವಳ್ಳಿ ಗ್ರಾಮ, ಹೊಳೆಹೊನ್ನೂರು, 4) ಮೊಹಮ್ಮದ್ ಸುಹೇಲ್ @ ಟುಯ್ಯಿ, 28 ವರ್ಷ, ಪಿಳ್ಳಂಗೇರಿ ಗ್ರಾಮ, ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಿ, ಪ್ರಕರಣಕ್ಕೆ ಸಂಬಂಧಿಸಿದ ರೂ 11,52,000/- ನಗದು ಹಣ, ಅಂದಾಜು ಮೌಲ್ಯ 1,50,000/- ರೂಗಳ 30 ಗ್ರಾಂ ಬಂಗಾರದ ಆಭರಣಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಶ್ಲಾಘಿಸಿ ಪ್ರಶಂಸಿಸಿರುತ್ತಾರೆ.

ವರದಿ ಪ್ರಜಾಶಕ್ತಿ…