ಭದ್ರಾವತಿ ನ್ಯೂಸ್…

ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿಯಾ ಈ-ಆಡಳಿತ ಇಲಾಖೆಯ ಗ್ರಾಮ ಒನ್ ಯೋಜನೆಯ ಭದ್ರಾವತಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅರ್ಜಿ ಸಲ್ಲಿಸುವ ಮೂಲಕ ಅತೀ ಹೆಚ್ಚು ಜನರಿಗೆ ಯೋಜನೆಯನ್ನು ಜನರಿಗೆ ತಲುಪಿಸುವ ಮೂಲಕ ಕಾರ್ಯಕ್ರಮ ಯಶಸ್ವಿ ಮಾಡಿದ್ದಾರೆ.

ಭದ್ರಾವತಿ ತಾಲ್ಲೂಕಿನ ದಡಮಘಟ್ಟ ಗ್ರಾಮ ಒನ್ ಕೇಂದ್ರದ ಸೈಯದ್ ಯೂಸುಫ್ ಅಲಿ, ಕೂಡ್ಲಿಗೆರೆ ಗ್ರಾಮ ಒನ್ ಕೇಂದ್ರದ ರುದ್ರೇಶ ಆರ್ ಎನ್, ಅನವೇರಿ ಗ್ರಾಮ ಒನ್ ಕೇಂದ್ರದ ಅಶೋಕ್ ಕುಮಾರ್ ರವರನ್ನು ತಾಲ್ಲೂಕು ಆಡಳಿತದಿಂದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಭಿನಂದನಾ ಪತ್ರವನ್ನು ನೀಡಿ ಹೆಚ್ಚು ಸೇವೆ ನೀಡಲು ಪ್ರೆರೇಪಿಸಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು, ಚುನಾಯಿತ ಪ್ರತಿನಿದಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿರಿದ್ದರು.

ವರದಿ ಪ್ರಜಾ ಶಕ್ತಿ…