ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ನಡೆದಂತಹ ಸಭೆಯಲ್ಲಿ ನಗರದ ಗಾಂಧಿ ಬಜಾರ್ ಭಾಗದ ನೂರಾರು ಯುವಕರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದಂತಹ ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದಂತಹ ಹೆಚ್ ಸಿ ಯೋಗೇಶ್ ರವರ ಸಮ್ಮುಖದಲ್ಲಿ ಯುವ ಮುಖಂಡರುಗಳಾದ ಲಕ್ಷ್ಮಣ್, ಅನಿಲ್, ರಾಘವೇಂದ್ರ, ರಾಮಚಂದ್ರ, ಕೃಷ್ಣ, ಹಾಗೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾದಂತ ಎನ್ ರಮೇಶ್ ರವರು,ಕೆಪಿಸಿಸಿ ದೇವೇಂದ್ರಪ್ಪ, ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಕಲೀಮ್, ಹಿಂದುಳಿದ ವರ್ಗದ ರಮೇಶ್ ಇಕ್ಕೇರಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾದ ಓಂ ಪ್ರಕಾಶ್ ತೇಲಕರ್,ಮೆಂತೆ ಸತೀಶ, ಶಿವಮೂರ್ತಿ ,ಸುಧೀರ, ಯುವ ಕಾಂಗ್ರೆಸ್ ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ವಿನಯ್, ಯುವ ಮುಖಂಡರುಗಳಾದಂತಹ ಬಾಲಾಜಿ, ಮಂಜುನಾಥ್,ಗಿರೀಶ್, ಮೋಹನ್ ಹಾಗೂ ಇನ್ನು ಹಲವಾರು ಕಾರ್ಯಕರ್ತರುಗಳಿದ್ದರು.

ವರದಿ ಪ್ರಜಾ ಶಕ್ತಿ…