ಗೋವಿಂದಪುರ ನಿವಾಸಿಗಳ ಸಂಘದಿಂದ ಮೂಲಭೂತ ಸೌಕರ್ಯಗಳು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಎಸ್ಆರ್ಟಿಸಿ ಬಸ್ಸಿನ ಸೌಕರ್ಯ , ಕಸದ ಗಾಡಿಯ ವ್ಯವಸ್ಥೆ ,ಮಹಾನಗರ ಪಾಲಿಕೆಯ ನೀರಿನ ಸರಬರಾಜು , ರಾತ್ರಿಯ ಪಾಳ್ಯದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ , ಮನೆಗಳಿಗೆ ಲೋನ್ ಸಾಲ ರಿಯಾಯಿತಿ , ಬೀದಿ ದೀಪದ ವ್ಯವಸ್ಥೆ , ಹಗಲು ಮತ್ತು ರಾತ್ರಿಯ ಪಾಳಯದಲ್ಲಿ ವಾಚ್ ಮ್ಯಾನ್ ವ್ಯವಸ್ಥೆ , ಸಂಘಕ್ಕೆ ಉಪಯೋಗವಾಗುವ ಕಚೇರಿ ವ್ಯವಸ್ಥೆ ಮಾಡಿಕೊಡಬೇಕಾಗಿ ಜಿಲ್ಲಾಧಿಕಾರಿಗಳಿಗೆ ವಿನಂತಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಂಕರ್ ಗೌಡ ಕಾರ್ಯದರ್ಶಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ