ಸಾಗರ ತಾಲ್ಲೂಕಿನ ಕುಗ್ವೆ ಗ್ರಾಮದ ಹೊಳೆಯ ಹತ್ತಿರ ಮಹಿಳೆಯೊಬ್ಬರು 02 ಜನ ಮಕ್ಕಳೊಂದಿಗೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂದು 112-ERSS ಸಹಾಯವಾಣಿಗೆ ಸಾರ್ವಜನಿಕರಿಂದ ಕರೆ ಬಂದ ಮೇರೆಗೆ, ERSS ವಾಹನದ ಅಧಿಕಾರಿಗಳಾದ ಶ್ರೀ ಶಿವರುದ್ರಯ್ಯ ಎ ಆರ್, ಹೆಚ್.ಸಿ, ಸಾಗರ ಪೇಟೆ, ಪೊಲೀಸ್ ಠಾಣೆ ಮತ್ತು ಚಾಲಕರಾದ ಶ್ರೀ ಶಿವಾನಂದ್, ಎಪಿಸಿ, ಡಿಎಆರ್ ಶಿವಮೊಗ್ಗ ರವರು ಕೂಡಲೇ ಕಾರ್ಯಪ್ರೌವೃತ್ತರಾಗಿ ಸ್ಥಳಕ್ಕೆ ಹೋಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದವರನ್ನು ತಡೆದು ಮಹಿಳೆ ಹಾಗೂ 02 ಮಕ್ಕಳು ಸೇರಿದಂತೆ 03 ಜನರನ್ನು ರಕ್ಷಿಸಿ, ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ.

ERSS ವಾಹನದ ಅಧಿಕಾರಿಗಳ ಉತ್ತಮ ಕಾರ್ಯವನ್ನು ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

ವರದಿ ಪ್ರಜಾ ಶಕ್ತಿ