ಶಿವಮೊಗ್ಗ ಬಿ ಉಪ ವಿಭಾಗ ಕಛೇರಿಯಲ್ಲಿ ಶ್ರೀ ಮಿಥುನ್ ಕುಮಾರ್ ಜಿ. ಕೆ. ನೇತೃತ್ವದಲ್ಲಿ *ನೊಂದವರ ಸಭೆಯನ್ನು ನಡೆಸಿ, ಅವರುಗಳ ಕುಂದು ಕೊರತೆಯನ್ನು ಆಲಿಸಿ, ನೊಂದವರ ಕುರಿತು ಮಾತನಾಡಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.

1) ದೂರುದಾರರೊಬ್ಬರು ಮಾತನಾಡಿ Make Free Trip ಎಂಬ ನಕಲಿ ಸಂಸ್ಥೆಯ ಹೆಸರಿನಲ್ಲಿ ಪ್ರವಾಸ ಕರೆದುಕೊಂಡು ಹೋಗುವುದಾಗಿ ನಂಬಿಸಿ ಹಣ ತೆಗೆದುಕೊಂಡು ಮೋಸ ಮಾಡಿರುತ್ತಾರೆಂದು ಹೇಳಿದ್ದು, ಈಗಾಗಲೇ ಈ ಕುರಿತಂತೆ ಪ್ರಕರಣ ದಾಖಲಾಗಿದ್ದು ಆರೋಪಿತರ ಪತ್ತೆಗಾಗಿ ಕ್ರಮ ಕೈಗೊಂಡಿರುತ್ತದೆ ಹಾಗೂ ಈ ರೀತಿಯ ನಕಲಿ ಜಾಲದ ಮೋಸಕ್ಕೆ ಒಳಗಾಗಬೇಡಿ ಎಂದು ಪೊಲೀಸ್ ಇಲಾಖೆಯಿಂದ ಅರಿವು ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರೂ ಸಹಾ ಸಾರ್ವಜನಿಕರು ಸುಲಭವಾಗಿ ಮೋಸದ ಜಾಲಕ್ಕೆ ಒಳಗಾಗುತ್ತಿದ್ದು, ಆನ್ ಲೈನ್ ಮುಖಾಂತರ ಹಣದ ವ್ಯವಹಾರ ಮಾಡುವಾಗ ಎಚ್ಚರವಹಿಸಿ ಎಂದು ಹೇಳಿದರು.

2) ಮಹಿಳೆಯೊಬ್ಬರು ತನ್ನ ಗಂಡ ಟ್ರಾನ್ಫರ್ ಮರ್ ಅಳವಡಿಸುವ ಕೆಲಸಕ್ಕೆ ಹೋದಾಗ ವಿಧ್ಯುತ್ ಅವಗಡದಿಂದಾಗಿ ಮೃತಪಟ್ಟಿರುತ್ತಾರೆ. ಆದರೆ ಇನ್ನೂ ಗುತ್ತಿಗೆದಾರರಿಂದ ಯಾವುದೇ ಪರಿಹಾರದ ಮೊತ್ತವು ಬಂದಿರುವುದಿಲ್ಲವೆಂದು ಹೇಳಿದ್ದು, ಈಗಾಗಲೇ ಈ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇಲಾಖೆಯು ಸೂಕ್ತ ಕಾಲಮಿತಿಯೊಳಗೆ ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಿದೆ. ಪರಿಹಾರಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಇಲಾಖೆಗೆ ಸಂಪರ್ಕಿಸುವುದು ಎಂದು ತಿಳಿಸಿ, ಈ ಕುರಿತಂತೆ ಸದರಿಯವರಿಗೆ ಸಹಾಯ ಮಾಡಲು ಪಿಐ ವಿನೋಬನಗರ ಪೊಲೀಸ್ ಠಾಣೆ ರವರಿಗೆ ಸೂಚಿಸಿದರು.

3) ಅಣ್ಣ ತಮ್ಮಂದಿರು ಜಮೀನು ವಿಚಾರಕ್ಕೆ ಸಂಬಂಧಿಸಿದ ನಡೆದ ಗಲಾಟೆ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರನ್ನು ನೀಡಿದ್ದು, ದೂರು ದಾಖಲಾದ ನಂತರ ನಾವು ಕುಳಿತು ಮಾತನಾಡಿ ರಾಜಿ ಮಾಡಿಕೊಂಡಿರುತ್ತೇವೆ ಆದ್ದರಿಂದ ದೂರು ಹಿಂಪಡೆಯುವ ಬಗ್ಗೆ ಕೇಳಿದ್ದು, ಯಾವುದೇ ಪ್ರಕರಣ ದಾಖಲಾದ ನಂತರ ತನಿಖಾಧಿಕಾರಿಗಳು ಸೂಕ್ತ ಕಾಲ ಮಿತಿಯೊಳಗೆ ಪ್ರಕರಣದ ತನಿಖೆ ಪೂರೈಸಿ, ತನಿಖೆಯಲ್ಲಿ ಕಂಡುಬರುವ ಅಂಶಗಳ ಆಧಾರದ ಮೇಲೆ ಘನ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಿದ್ದು, ಘನ ನ್ಯಾಯಾಲಯದಲ್ಲಿ ರಾಜಿಯಾಗಲು ನಿಮಗೆ ಅವಕಾಶವಿರುತ್ತದೆ ಎಂದು ತಿಳಿಸಿದರು.

4) ಮಹಿಳೆಯೊಬ್ಬರು ತನ್ನ ಗಂಡ ನನಗೆ ಕೌಟುಂಬಿಕ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಈಗಾಗಲೇ ದೂರು ನೀಡಿರುತ್ತೇನೆ ಆದರೂ ಸಹಾ ಪದೇ ಪದೆ ನನಗೆ ಹಲ್ಲೆ ಮಾಡುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದು, ಈ ಕುರಿತಂತೆ ಈಗಾಗಲೇ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿಗಳಿಗೆ ಪ್ರಕರಣದ ತನಿಖೆಯನ್ನು ಸೂಕ್ತ ಕಾಲ ಮಿತಿಯಲ್ಲಿ ಪೂರೈಸಿ ಘನ ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಮತ್ತು ನೊಂದ ಮಹಿಳೆಗೆ ಆತನ ಗಂಡ ಪುನಾಃ ಹಲ್ಲೆ ಮಾಡಿ ತೊಂದರೆ ನೀಡಿದ್ದಲ್ಲಿ ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

5) ದೂರುದಾರರೊಬ್ಬರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾರೋ ವ್ಯಕ್ತಿಗಳು ನನ್ನ ಮೇಲೆ ಹಲ್ಲೆ ಮಾಡಿರುತ್ತಾರೆಂದು ತಿಳಿಸಿದ್ದು, ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿರುತ್ತದೆ ಮತ್ತು ಆರೋಪಿತರ ದಸ್ತಗಿರಿ ಸಹಾ ಮಾಡಲಾಗಿರುತ್ತದೆ. ಅವರಿಂದ ನಿಮಗೆ ಪುನಾಃ ಯಾವುದೇ ರೀತಿಯ ತೊಂದರೆಯಾದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ, ಕಾನೂನಿನ ಅಡಿಯಲ್ಲಿ ನಿಮಗೆ ಸೂಕ್ತ ರಕ್ಷಣೆ ನೀಡಲಾಗುತ್ತದೆ ಎಂದು ತಿಳಿಸಿದರು.

6) ಅಪರಾಧಗಳನ್ನು ತಡೆಗಟ್ಟಲು ಮತ್ತು ಅಪರಾಧ ಜರುಗಿದಾಗ ಶೀಘ್ರವಾಗಿ ಪತ್ತೆ ಮಾಡುವ ಸಂಬಂಧ ಮತ್ತು ನಿಮ್ಮ ಸುರಕ್ಷತೆಯ ದೃಷ್ಠಿಯಿಂದ Public Safety Act ನ ಅಡಿಯಲ್ಲಿ ನಿಮ್ಮ ಮನೆ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸುವುದು ಸೂಕ್ತವೆಂದು ತಿಳಿಸಿದರು.

7) ಸಾರ್ವಜನಿಕರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ನಂತರ ನೀವು ನೀಡಿದ ಪ್ರಕರಣದಲ್ಲಿ ಅಂತಿಮ ವರದಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸುವ ವರೆಗೆ, ಠಾಣೆಗೆ ಬಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರ್, ಸಾಕ್ಷಿ ಹೇಳಿಕೆಗಳು, ದಾಖಲಾತಿಗಳು, ತನಿಖಾ ಹಂತ ಹಾಗೂ ಪ್ರಕರಣದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ತನಿಖಾಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಳ್ಳುವುದು ಮತ್ತು ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ಸ್ಪಂದನೆಯ ಬಗ್ಗೆ ಯಾವುದೇ ಕುಂದುಕೊರತೆಗಳಿದ್ದಲ್ಲಿ ಇಲಾಖಾ ಮೇಲಾಧಿಕಾರಿಗಳ ಗಮಕ್ಕೆ ತರುವುದು.

8) ದೂರುದಾರರಿಗೆ ದೂರು ನೀಡುವ ಸಮಯದಲ್ಲಿ ಇರುವ ಆಸಕ್ತಿಯು ನಂತರ ಕಡಿಮೆಯಾಗುತ್ತಾ ಹೋಗುತ್ತದೆ, ಈ ರೀತಿಯ ದೋರಣೆಯಿಂದಾಗಿ ಘನ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಸಾಕ್ಷಿ ಹೇಳಿಕೆ ನೀಡದೇ ಪ್ರಕರಣಗಳು ಖುಲಾಸೆಯಾಗುತ್ತಿವೆ. ಆದ್ದರಿಂದ ಸಾರ್ವಜನಿಕರು ದೂರು ನೀಡಿದ ನಂತರವೂ ಸಹಾ ವಿಚಾರಣೆಯ ವೇಳೆ ಘನ ನ್ಯಾಯಾಲಯಕ್ಕೆ ಹಾಜರಾಗಿ ದೂರು ನೀಡಿದ ಸಂದರ್ಭದಲ್ಲಿ ಹೇಳಿದ ಸಾಕ್ಷಿ ಹೇಳಿಕೆಯನ್ನು ಅದೇ ರೀತಿ ನೀಡುವುದರಿಂದ ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸಲು ಸಾಧ್ಯವಿರುತ್ತದೆ.

9) ಘನ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯಲು ಆರೋಪಿತರು ದೂರುದಾರರಿಗೆ / ಸಾಕ್ಷಿಗಳಿಗೆ ಯಾವುದೇ ಒತ್ತಡ / ಯಾವುದೇ ರೀತಿಯ ತೊಂದರೆ ನೀಡುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಆಗ ಅಂತಹವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಂಡು ನಿಮಗೆ ರಕ್ಷಣೆ ನೀಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಶ್ರೀಮತಿ ಚಂದ್ರಕಲಾ, ಪಿಐ ವಿನೋಬನಗರ ಪೊಲೀಸ್ ಠಾಣೆ, ಶ್ರೀ ಸಿದೇಗೌಡ, ಪಿಐ ಜಯನಗರ ಪೊಲೀಸ್ ಠಾಣೆ, *ಶ್ರೀ ರವಿ ಪಾಟೀಲ್, ಪಿಐ ದೊಡ್ಡಪೇಟೆ ಪೊಲೀಸ್ ಠಾಣೆ, *ಶ್ರೀ ಭರತ್ ಕುಮಾರ್ ಪಿಐ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆ, ಪೊಲೀಸ್ ಉಪ ನಿರೀಕ್ಷಕರು ಹಾಗೂ ನೊಂದವರು / ದೂರುದಾರರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ