ಶಿವಮೊಗ್ಗ ನಗರದ ಗಜಾನನ್ ಲೇಔಟ್ ನಲ್ಲಿ ಮಾನಸಿಕ ಅಸ್ವಸ್ಥರ, ಅಂಗವಿಕಲ, ಪಾರ್ಶವಾಯು ಪೀಡಿತರ ಪುನ್ಹಶ್ವೇತನ ಹಾಗೂ ಅಶಕ್ತ ಹಿರಿಯ ನಾಗರೀಕರ ವಸತಿಯುಕ್ತ ಗುಡ್ ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡದ ಲೋಕಾರ್ಪಣೆ ಹಾಗೂ ಉದ್ಘಾಟನಾ ಸಮಾರಂಭವನ್ನು ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ.ಎಸ್.ಅರುಣ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಶ್ರೀ ಕೆ.ಎಸ್.ಈಶ್ವರಪ್ಪ ಅವರು, ಉಪನ್ಯಾಸಕರಾದ (ಮಂಕುತಿಮ್ಮನ ಕಗ್ಗ ಖ್ಯಾತಿ) ಶ್ರೀ.ಜಿ.ಎಸ್.ನಟೇಶ್, ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಪ್ರತಕರ್ತರಾದ ಶ್ರೀ.ಎಸ್.ಚಂದ್ರಕಾಂತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ.ಈ. ಕಾಂತೇಶ್, ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷರಾದ ಶ್ರೀ ಯು.ರವೀಂದ್ರನಾಥ್ ಐತಾಳ್, ನಿರ್ದೇಶಕರಾದ ವಿಜಯ್ ಕುಮಾರ್, ಕಾರ್ಯದರ್ಶಿಗಳಾದ ಶ್ರೀ ಪಂಚಾಕ್ಷರಯ್ಯ ಹಿರೇಮಠ್ ಹಾಗೂ ನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತಿದ್ದರು.

ವರದಿ ಪ್ರಜಾ ಶಕ್ತಿ