ಶಿವಮೊಗ್ಗ ನಗರದ ಪೊಲೀಸ್ ಚೌಕಿಯಿಂದ ಉಷಾ ನರ್ಸಿಂಗ್ ಹೋಂ ವರೆಗೆ ಬೀದಿ ಬದಿಯಲ್ಲಿ ಹಣ್ಣು ತರಕಾರಿ ಸೊಪ್ಪು ತಿಂಡಿಗಾಡಿಗಳು, ಇತ್ಯಾದಿಗಳನ್ನು ಮಾರಾಟ ಮಾಡುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ದಿನಾಂಕ : 08-08-2021 ಭಾನುವಾರದಂದು ರಾತ್ರಿ 8-30 ರ ವೇಳೆಗೆ ಏಕಾಏಕಿ ಈ ಜಾಗದಲ್ಲಿ ಯಾವುದೇ ರೀತಿಯ ವ್ಯಾಪಾರ ಮಾಡಬಾರದು ಎಂದು ಹಾಗೇನಾದರೂ ಮಾಡಿದ್ದಲ್ಲಿ ನಿಮ್ಮ ವ್ಯಾಪಾರ ಮಾಡುತ್ತಿರುವ ಸಗಟನ್ನು ಎತ್ತುಕೊಂಡು ಹೋಗಲಾಗುವುದು ಎಂದು 4ಜನ ವ್ಯಕ್ತಿಗಳು ನಾವು ಮಹಾನಗರಪಾಲಿಕೆಯಿಂದ ಬಂದಿದ್ದೇವೆ, ಹೆಲ್ತ್ ಇನ್ಸ್ ಪೆಕ್ಟರ್ ಎಂದು ಹೇಳಿರುತ್ತಾರೆ. ಹಾಗಾಗಿ ಈ ಬೀದಿ ವ್ಯಾಪಾರಿಗಳನ್ನು ಏಕಾಏಕಿ ಒಕ್ಕಲೆಬ್ಬಿಸದೆ, ಪೂರಕ ಸ್ಥಳವನ್ನು ನಿಗದಿ ಪಡಿಸದ ಹೊರತು ಒಕ್ಕಲೆಬ್ಬಿಸಬಾರದು. ಆತ್ಮ ನಿರ್ಭರ್ ಯೋಜನೆಯಡಿ ಸಾಲ ಪಡೆದು ಲಾಕ್ ಡೌನ್ ನಿಂದ ಸಾಲ ಕಟ್ಟದ ಪರಿಸ್ಥಿತಿಯಲ್ಲಿರುವವರು ಇವರಾಗಿದ್ದು ಇವರನ್ನು ಪೂರಕ ಸ್ಥಳವನ್ನು ನೀಡದೆ ಒಕ್ಕಲೆಬ್ಬಿಸಬಾರದೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಾರೆ.

LIC policy ಗಾಗಿ ಸಂಪರ್ಕಿಸಿ 9538615354

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153