ಮಂಗಳೂರು ಮೆಸ್ಕಾಂ ವಲಯ ಕಚೇರಿ ಇವರ ಆದೇಶದಂತೆ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ಮೆಸ್ಕಾಂ ಶಿವಮೊಗ್ಗ ಉಪ ವಿಭಾಗ ಹಾಗೂ ಶಾಖಾ ಕಛೇರಿ ಮಟ್ಟದಲ್ಲಿ ಗ್ರಾಹಕರ ಸಲಹಾ ಸಮಿತಿ ರಚನೆ ಮಾಡಲಾಗಿದೆ.
ಗ್ರಾಹಕರ ಸಲಹಾ ಸಮಿತಿಗೆ ಗ್ರಾಹಕ ಪ್ರತಿನಿಧಿ, ಹಿಂದುಳಿದ ವರ್ಗಗಳ ಪ್ರತಿನಿಧಿ ಮತ್ತು ಮಹಿಳಾ ಪ್ರತಿನಿಧಿಯಾಗಿ ಶಿವಮೊಗ್ಗ ಬಂಟ ಸಮಾಜದ 3 ಜನರನ್ನು ನೇಮಕ ಮಾಡಲಾಗಿದೆ.
1. ಡಾ. ಅಶೋಕ್ ಶೆಟ್ಟಿ, ಬಾಪೂಜಿ ನಗರ
2. ಬಿ ಎ ಸುರೇಶ್ ಶೆಟ್ಟಿ, ಕುವೆಂಪು ರಸ್ತೆ
3. ಪ್ರೇಮ ಶೆಟ್ಟಿ, ನೇತಾಜಿ ಸರ್ಕಲ್.
ಶಿವಮೊಗ್ಗ ಬಂಟರ ಯಾನೆ ನಾಡವರ ಸಂಘದ ಸಮಸ್ತ ಸಮಾಜ ಬಾಂಧವರ ವತಿಯಿಂದ ಮೇಲ್ಕಂಡ ಗೌರವಾನ್ವಿತ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.