ಮಂಜುನಾಥ್ ಶೆಟ್ಟಿ…

ಕರವೇ ಜನಮನ ರಾಜ್ಯ ಸಂಘಟನೆಯ ಪದವಿ ಪ್ರಧಾನ ಪತ್ರ ವಿತರಣೆ. ಕನ್ನಡ ರಕ್ಷಣಾ ವೇದಿಕೆ ಜನಮನ ರಾಜ್ಯ ಸಂಘಟನೆಯ ಪದಾಧಿಕಾರಿಗಳ ಅಧಿಕಾರದ ಪ್ರಮಾಣ ವಚನ ಸಮಾರಂಭವು ಶಿವಮೊಗ್ಗದ ಸರ್ಕ್ಯೂಟ್ ಹೌಸ್ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಜರುಗಿತು.
ಈ ಕಾರ್ಯಕ್ರಮದಲ್ಲಿ ಜನಮನ ಸಂಘಟನೆಯ ರಾಜ್ಯಾಧ್ಯಕ್ಷರಾದ ಕೆ ಜನಾರ್ಧನ್ ಸಾಲಿಯನ್ ರವರು ಭಾಗವಹಿಸಿ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಎನ್, ಮಾಲತೇಶ್,ಸಹಕಾರ್ಯದರ್ಶಿಯಾಗಿ ಪಿ ಪಾರ್ಥಿಬನ್,ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೆ ಕಿರಣ್ ಕುಮಾರ್,ರಾಜ್ಯ ಉಪಾಧ್ಯಕ್ಷರಾಗಿ ಶ್ರೀ ಮತಿ ವೀಣಾ ಹೆಚ್,ಮತ್ತು ಶ್ರೀ ಮತಿ ಸುಮಾ ಕೆ ಎಸ್, ರಾಜ್ಯ ಖಜಾಂಚಿಯಾಗಿ ಸಿದ್ದಣ್ಣಯ್ಯ, ನಿರ್ದೇಶಕರುಗಳಾದ ಎಸ್ಆರ್ ಅಶೋಕ್,ಹಾಗೂ ಸಂಗೇಶ್ವರ, ಇವರುಗಳು ಅಧಿಕಾರದ ಪ್ರಮಾಣ ವಚನವನ್ನು ಸ್ವೀಕರಿಸಿದರು.
ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಯಿತು.ಈ ಸಭೆಯಲ್ಲಿ ಇನ್ನಿತರ ಸದಸ್ಯರುಗಳಾದ ಮೈಕಲ್ ಮುರುಗನ್, ಪ್ರತಾಪ್,ರಂಜಿತ್ ಗಾಯಕ್ವಾಡ್, ರಾಮು ವಿ,ಲಕ್ಷ್ಮೀಶ ಡಿ ಆರ್, ಹರ್ಷಿತ್ ಭಾರದ್ವಾಜ್, ಶ್ರೀನಿವಾಸ್, ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಸಂಘಟನೆಯ ವಿಷಯದಲ್ಲಿ ಅವಿರತ ಪ್ರಯತ್ನಿಸಿದ ಶ್ರೀ ಮತಿ ವೀಣಾ ಹೆಚ್ ರವರನ್ನು ಸನ್ಮಾನಿಸಲಾಯಿತು. ಶಿವಮೊಗ್ಗ ತಾಲೂಕು ವಿವಿಧ ಜಿಲ್ಲೆಯ ರಾಜ್ಯ ಸಂಘಟನೆಯ ಸಂಘಟಿತರಾಗಲು ಸಂಪರ್ಕಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ,ಮಾಲತೇಶ್ ಶಿವಮೊಗ್ಗ 9901826004