ಮಂಜುನಾಥ ಶೆಟ್ಟಿ…

ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ಎಂ ಎಸ್ ರವರು ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿ ಸಂಚಾರಿ ಈ ಚಲಾನ್ ಪ್ರಕರಣಗಳಲ್ಲಿ ಪಾವತಿಸಬೇಕಾದ ದಂಡದ ಮೊತ್ತದ ಪ್ರಗತಿಯನ್ನು ಪರಿಶೀಲನೆ ಮಾಡಿದರು.

ಈ ಸಮಯದಲ್ಲಿ ತಿಳಿದು ಬಂದ ಮಾಹಿತಿಯಂತೆ ಶಿವಮೊಗ್ಗದಲ್ಲಿ ದಿನಾಂಕ 21.6.2026 ರಿಂದ ದಿನಾಂಕ 01.07.2026 ರವರೆಗೆ ಒಟ್ಟು 10,778 ಈ ಚಲಾನ್ ಪ್ರಕರಣಗಳಲ್ಲಿ ಒಟ್ಟು ರೂ. 46,06,500 ಹಣವನ್ನು ಶೇಕಡ 50ರಷ್ಟು ರಿಯಾಯಿತಿಯಲ್ಲಿ ಪಾವತಿಸಿ ಹಲವರು ಇತ್ತೀಚಿಗೆ ಘನ ಕರ್ನಾಟಕ ರಾಜ್ಯ ಸರ್ಕಾರವು ಹೊರಡಿಸಿದ ಸರ್ಕಾರಿ ಆದೇಶದ ಲಾಭವನ್ನು ಪಡೆದ ಬಗ್ಗೆ ಹಾಗೂ ದಂಡದ ಮೊತ್ತವನ್ನು ಸಂಗ್ರಹಿಸುವಲ್ಲಿ ಸಂಚಾರಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.

ಶಿವಮೊಗ್ಗದಲ್ಲಿ ಒಟ್ಟು 2,99,037 ಪ್ರಕರಣಗಳು ಸರ್ಕಾರಿ ಆದೇಶ ಹೊರಡಿಸಿದ ಸಮಯದಲ್ಲಿ ದಾಖಲಾಗಿ ಒಟ್ಟು ರೂ. 23,71,18,350 ದಂಡದ ಮೊತ್ತ ಪಾವತಿಗೆ ಬಾಕಿ ಇತ್ತು. ಆದ್ದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ವಾಹನದ ಮೇಲೆ ವಿಧಿಸಲಾದ ಸಂಚಾರಿ ಈ ಚಲಾನ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಎಲ್ಲಾ ವೃತ್ತಗಳಲ್ಲಿ ನಿಯೋಜನೆ ಆಗಿರುವಂತಹ ಸಂಚಾರಿ ಪೊಲೀಸರಲ್ಲಿ ತಮ್ಮ ವಾಹನ ಸಂಖ್ಯೆಯನ್ನು ನೀಡಿ ದಂಡದ ಮೊತ್ತದ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ಹಾಗೂ ಅಂತರ್ಜಾಲ ಪುಟ https://103.195.218.159/challan ಗೆ ಬೆಟ್ಟಿ ನೀಡಿ ಮಾಹಿತಿಯನ್ನು ಪಡೆದು ಶೀಘ್ರದಲ್ಲಿ, ಅಂದರೆ ದಿನಾಂಕ 10.07.2026ರ ಒಳಗಾಗಿ, ಬಾಕಿ ಉಳಿದ ದಂಡದ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿಯನ್ನು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಜನರು ದಂಡವನ್ನು ಪಾವತಿಸಿ ಸರ್ಕಾರಿ ಆದೇಶದ ಹೆಚ್ಚಿನ ಲಾಭವನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *