ಮಂಜುನಾಥ ಶೆಟ್ಟಿ…
ಅಥ್ಲೆಟಿಕ್ಸ್ ಅಸೋಸಿಯೇಷನ್ಸ್ ವತಿಯಿಂದ ಆ. 11 ಮತ್ತು 12 ರಂದು ಬೆಂಗಳೂರಿನ ಕಂಠೀರಣ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಮಟ್ಟದ 16 ವರ್ಷದೊಳಗಿನ ಕಿರಿಯರ ಅಥ್ಲೆಟಿಕ್ಸ್ ಚ್ಯಾಂಪಿಯನ್ಶಿಪ್ ಕ್ರೀಡಾಕೂಟದ ವಿವಿಧ ಸ್ಪರ್ಧೆ ಗಳಲ್ಲಿ ಶಿವಮೊಗ್ಗ ಜಿಲ್ಲಾ ವಸತಿ ನಿಲಯದ ಕ್ರೀಡಾಪಟುಗಳು ವಿಜೇತರಾಗಿದ್ದಾರೆ.
ಲೋಹಿತ್ ಗೌಡ ಬಿ.ಸಿ. -ಉದ್ದಜಿಗಿತದಲ್ಲಿ ಪ್ರಥಮ-ಕೂಟ ದಾಖಲೆ ಮತ್ತು ಪೆಂಟಾತ್ಲಾನ್ನಲ್ಲಿ ದ್ವಿತೀಯ, ಆರೋನ್ ಎನ್.ಬಿ. -ಎತ್ತರ ಜಿಗಿತದಲ್ಲಿ ಪ್ರಥಮ ಕೂಟ ದಾಖಲೆ, ಶರತ್ ಹೆಚ್.- ಟ್ರೈಯಾತ್ಲನ್ ಎ ಗ್ರೂಪ್ನಲ್ಲಿ ಪ್ರಥಮ, ವಂಶಿ ಟಿ.-60 ಮೀ ಓಟದಲ್ಲಿ ದ್ವಿತೀಯ, ದಿಗಂತ್ ಕೆ.ಡಿ.-ಎತ್ತರ ಜಿಗಿತದಲ್ಲಿ ದ್ವಿತೀಯ, ಪದ್ಮಾವತಿ- ಜಾವೆಲಿನ್ ಎಸೆತದಲ್ಲಿ ಪ್ರಥಮ-ಕೂಟ ದಾಖಲೆ, ಅಪೂರ್ವ ಹೆಚ್.ಎನ್.-600 ಮೀ. ಓಟದಲ್ಲಿ ತೃತೀಯ ಹಾಗೂ ಆರಾಧ್ಯ ಎಸ್.ಗೌಡ- ಟ್ರೈಯಾತ್ಲನ್ ಎ ಗ್ರೂಪ್ನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.
ಜಿಲ್ಲೆಗೆ ಹೆಮ್ಮೆ ತಂದುಕೊಟ್ಟ ಈ ಎಲ್ಲಾ ಕ್ರೀಡಾಪಟುಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳಾಗಿದ್ದು, ಅಥ್ಲೆಟಿಕ್ ತರಬೇತುದಾರರಾದ ಬಾಳಪ್ಪ ಮಾನೆಯವರಲ್ಲಿ ದೈನಂದಿನ ತರಬೇತಿ ಪಡೆಯುತ್ತಿದ್ದಾರೆ.
ಈ ಎಲ್ಲಾ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ, ಶಿವಮೊಗ್ಗ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಉದಯಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ತಿಳಿಸಿದ್ದಾರೆ.