ಮಂಜುನಾಥ ಶೆಟ್ಟಿ…
ಲೈಫ್ ಲೈನ್ ಚಿಕನ್ ಸಂಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆ ರವರನ್ನು ಚಿಕ್ಕಮಗಳೂರು ಉಡುಪಿ ಸಂಸದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ರವರು ಸನ್ಮಾನಿಸಿದರು.ಕೇಂದ್ರ ಸರ್ಕಾರದ 11 ವರ್ಷಗಳ ಸಾಧನೆ ಪುಸ್ತಕವನ್ನು ನೀಡಿ ದಂಪತಿಗಳಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಿಶೋರ್ ಕುಮಾರ್ ಹೆಗ್ಡೆ ಅವರ ಉದ್ಯಮ ಬಹುತೇಕ ದೇಶ ಮತ್ತು ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.
ಮುಂದೆಯೂ ಸಹ ರೀತಿಯಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಲ್ಕುಡರಪ್ಪ ವಿನೋದ್ ಭೋಗಸೆ ದೀಪಕ್ ದೊಡ್ಡಯ್ಯ ಮುಂತಾದವರು ಉಪಸ್ಥಿತರಿದ್ದರು.