ಶಿವಮೊಗ್ಗ: ಗೌಡಸಾರಸ್ವತ ಬ್ರಾಹ್ಮಣ ಸಮಾಜದ ಪ್ರಮುಖರು ಕೈಗಾರಿಕೋದ್ಯಮಿ ದಿವಂಗತ
ಉಪೇಂದ್ರ ನಾಯಕ್ ಅವರ ಪುತ್ರ ಕೆ.ಪದ್ಮನಾಭ ನಾಯಕ್ (58) ನಿನ್ನೆ ಬೆಂಗಳೂರಿನಲ್ಲಿ
ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ ಹಾಗೂ ಓರ್ವ ಪುತ್ರ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸರಳ ಸಜ್ಜನ ವ್ಯಕ್ತಿತ್ವದ ಸ್ನೇಹಜೀವಿಯಾಗಿದ್ದ ಪದ್ಮನಾಭ ನಾಯಕ್ ಅವರ ನಿಧನಕ್ಕೆ
ಶಿವಮೊಗ್ಗ ಗೌಡಸಾರಸ್ವತ ಸಮಾಜ ಕಂಬನಿ ಮಿಡಿದಿದ್ದು, ಮೃತರ ಅಂತ್ಯಕ್ರಿಯೆ ಇಂದು ರೋಟರಿ
ಚಿತಾಗಾರದಲ್ಲಿ ನಡೆಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…