“ಶಿವಮೊಗ್ಗ ನಗರದ ನೂತನ ಜಿಲ್ಲಾಧಿಕಾರಿಗಳಾದ ಡಾ‡ ಆರ್. ಸೆಲ್ವಮಣಿ ಭಾ.ಆ.ಸೇ. ರವರಿಗೆ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆ, ಶಿವಮೊಗ್ಗ ವತಿಯಿಂದ ಆದರದ ಸ್ವಾಗತ”
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ವತಿಯಿಂದ ಇಂದು ಬೆಳಗ್ಗೆ ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಮಾನ್ಯ ಶ್ರೀ ಡಾ‡ ಆರ್. ಸೆಲ್ವಮಣಿ ರವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶ ಶಾಸ್ತಿಯವರು ಜಿಲ್ಲಾ ಸಂಸ್ಥೆಯ ಪದಾಧಿಕಾರಿಗೊಂದಿಗೆ ಆತ್ಮೀಯವಾಗಿ ಸ್ಕಾರ್ಫ ತೊಡಿಸಿ ಪುಷ್ಪಗುಚ್ಚವನ್ನು ನೀಡಿ ಸ್ವಾಗತಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಅಧ್ಯಕ್ಷರು ತಾವುಗಳೆ ಆಗಿದ್ದು, ಜಿಲ್ಲಾ ಸಂಸ್ಥೆಯ ಎಲ್ಲಾ ಕಾರ್ಯಚಟುವಟಿಕೆ ಮತ್ತು ತರಬೇತಿ ಶಿಬಿರಗಳನ್ನು ತಮ್ಮ ಘನ ಅಧ್ಯಕ್ಷತೆಯಲ್ಲಿ ನಡೆಸಿಕೊಡಬೇಕೆಂದು ಮನವಿ ಮಾಡಿದರು. ಇದಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಸಮ್ಮತಿ ಸೂಚಿಸಿ ಜಿಲ್ಲಾ ಸ್ಕೌಟ್ ಭವನಕ್ಕೆ ಭೇಟಿ ನೀಡುವುದಾಗಿಯು ಆ ಸಮಯದಲ್ಲೆ ಕಾರ್ಯಚಟುವಟಿಕೆ ಕ್ಯಾಂಪ್‌ಗಳ ಬಗ್ಗೆ ಸುಧೀರ್ಘವಾಗಿ ಚರ್ಚೆ ಮಾಡುವುದಾಗಿಯು ಸ್ಕೌಟಿಂಗ್ ಗೈಡಿಂಗ್ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಆಗಿ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಡೋಣ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಕ್ತರು (ಸ್ಕೌಟ್ಸ್) ಶ್ರೀ ಕೆ.ಪಿ.ಬಿಂದು ಕುಮಾರ್, ಜಿಲ್ಲಾ ಆಯುಕ್ತರು (ಗೈಡ್ಸ್) ಶ್ರೀಮತಿ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಶ್ರೀ ಚುಡಾಮಣಿ ಇ ಪವಾರ್, ಎ.ಎಸ್.ಒ.ಸಿ(ಗೈಡ್ಸ್) ಶ್ರೀಮತಿ ಭಾರತಿ ಡಾಯಸ, ಜಿಲ್ಲಾ ಸಾರ್ವಜನಿಕ ಸಂಪಾರ್ಕಾಧಿಕಾರಿ ಶ್ರೀ ಜಿ.ವಿಜಯ್ ಕುಮಾರ್ ರವರುಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…