ಶಿವಮೊಗ್ಗದಿಂದ ಮಣಿಪಾಲ್ ಹೋಗುವ 169 ರಾಷ್ಟ್ರೀಯ ಹೆದ್ದಾರಿ ಆಗುಂಬೆ ಘಾಟಿನಲ್ಲಿ ಮಾರ್ಚ್ 5 ರಿಂದ 15ರ ವರೆಗೆ ಘಾಟಿನಲ್ಲಿ ರಸ್ತೆ ದುರಸ್ತಿ ಕಾರ್ಯ ಹಿನ್ನೆಲೆ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರವರು ಆದೇಶಿಸಿದ್ದಾರೆ.

ಲಘು ವಾಹನಗಳು ಪರ್ಯಾಯ ಮಾರ್ಗ…

1.ತೀರ್ಥಹಳ್ಳಿ ಕೊಪ್ಪ ಶೃಂಗೇರಿ ಮಾಲ ಘಾಟ್ ಕಾರ್ಕಳ ಮೂಲಕ ಉಡುಪಿ ತಲುಪಬಹುದು.

2.ತೀರ್ಥಹಳ್ಳಿ ಮಾಸ್ತಿಕಟ್ಟೆ ಹೊಸಂಗಡಿ ಸಿದ್ದಾಪುರ ಕುಂದಾಪುರ ಮೂಲಕ ಉಡುಪಿ ತಲುಪಬಹುದು.

ಅದರಿಂದ ಮಾರ್ಚ್ 5 ರಿಂದ 15ರ ವರೆಗೆ ಆಗುಂಬೆ ಘಾಟಿ ನಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…