ಶಿವಮೊಗ್ಗ: ಕನಕನಗರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗದ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ಅವರ ಅನುದಾನದಲ್ಲಿ ಲಾಕಿಂಗ್ ಟೈಲ್ಸ್ ಹಾಗೂ ಫೆವರ್ಸ್ ಅಳವಡಿಕೆಗೆ ಭೂಮಿ ಪೂಜೆಯನ್ನು ಇಂದು  ವಾರ್ಡಿನ ಪಾಲಿಕೆ  ಸದಸ್ಯೆ ಆಶಾ ಚಂದ್ರಪ್ಪ ಹಾಗೂ ರೇಖಾ ರಂಗನಾಥ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಜಿ ಉಪ ಮಹಾಪೌರರಾದ ಹೆಚ್. ಪಾಲಾಕ್ಷಿ, ಪಾಲಿಕೆಯ ಮಾಜಿ ಸದಸ್ಯರಾದ ಸಿ.ಹೆಚ್. ಮಾಲತೇಶ್, ಆರ್. ಮೋಹನ್, ಪ್ರಮುಖರಾದ ಕೆ. ರಂಗನಾಥ್, ಚಂದ್ರಶೇಖರ್, ಚಂದ್ರಪ್ಪ ಬೊಮ್ಮನಕಟ್ಟೆ, ಎಂ .ರಾಕೇಶ್, ಕೆ.ಎಲ್.  ಪವನ್ ಇತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…