ಶಿವಮೊಗ್ಗದ ಜಿಲ್ಲಾ ಮಂತ್ರಿ ಹಾಗು ಶಾಸಕರಾದ ಕೆ ಎಸ್ ಈಶ್ವರಪ್ಪನವರ ಹೆಸರು ಬರೆದಿಟ್ಟು ಬಿಜೆಪಿ ಕಾರ್ಯಕರ್ತ ಹಾಗು ಹಿಂದೂ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಆದೇಶದ ಮೇರೆಗೆ ತುರ್ತಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು , ಈಶ್ವರಪ್ಪ ರಾಜಿನಾಮೆಗೆ ಹಾಗು ಬೊಮ್ಮಾಯಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದೇವೇಂದ್ರಪ್ಪ , ಸೌಗಂಧಿಕಾ , ಯೋಗೀಶ್ , ರಮೇಶ್ ಹೆಗ್ಡೆ , ಯಮುನಾ , ಕವಿತಾ , ಚಂದ್ರಬೋಪಾಲ್ , ಅನ್ನು , ಚಂದನ್ , ರಾಮೇಗೌಡರು , ಪಕ್ಷದ ಮುಖಂಡರು ಹಾಗು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…