ಬೀದಿ ಬದಿ ವ್ಯಾಪಾರಿಗಳಿಗೆ 10ನೇ ದಿನಕ್ಕೆ ಕಾಲಿಟ್ಟ ಲಸಿಕೆ ಹಾಕುವ ಕಾರ್ಯ, ಇದುವರೆಗೂ 2329 ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ಹಾಕಿದ್ದು,ಈ ದಿನ ತಾಲ್ಲೂಕು ಇಂಚಾರ್ಜ್ ಅಧಿಕಾರಿಗಳಾದ ಡಾ.ಉಮಾ ರವರು ಮತ್ತು ಸಿಗೇಹಟ್ಟಿ, ತುಂಗಾನಗರ, ಊರುಗಡೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಇಲಾಖೆ ವೈದ್ಯಾಧಿಕಾರಿಗಳಾದ ಡಾ.ಉಮಾ, ಡಾ.ಭೀಮಪ್ಪ ಆರ್ಬಿಸ್ ಅಧಿಕಾರಿಗಳಾದ ಡಾ.ಅಮೀನಾ, ಡೆಂಟಲ್ ಅಧಿಕಾರಿಗಳಾದ ಡಾ.ಸತೀಶ, ಹಾಗೂ ಸಿಬ್ಬಂದಿ ವರ್ಗದವರು ಸೇರಿ146 ಸ್ವಾಬ್ ಟೇಸ್ಟ್ ನೊಂದಿಗೆ 288 ಜನರಿಗೆ ಕೊವೀಡ್ ಶಿಲ್ಡ್ ಲಸಿಕೆ ಹಾಕುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚನ್ನವೀರಪ್ಪ ಗಾಮನಗಟ್ಟಿ, ಟಿವಿಸಿ ಸದಸ್ಯರಾದ ನಾರಾಯಣ, ಶೇಷಯ್ಯ, ವಿನಾಯಕ, ಪಾಲಿಕೆ ಅಧಿಕಾರಿ CAOರಾದ ಅನುಪಮಾ, COಗಳಾದ ಲೋಕೇಶಪ್ಪ,ರತ್ನಾಕರ್, ರೇಣುಕಾ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಕಾಶಿ, ಪಾಲಿಕೆ ಸಿಬ್ಬಂದಿ ವರ್ಗದವರು ಮತ್ತು ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರರೂ ಉಪಸ್ಥಿತರಿದ್ದರು.

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153