ಶಿವಮೊಗ್ಗ: ಭಾನುವಾರ ನಗರದ ಪ್ರತಿಷ್ಟಿತ ಶಿವಮೊಗ್ಗ ಕಂಟ್ರಿ ಕ್ಲಬ್ ಆವರಣದಲ್ಲಿ ನೂತನ ಕ್ರೀಡಾ ಸಂಕೀರ್ಣವನ್ನು ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ಉಪಾಧ್ಯಕ್ಷರಾದ ಜೆ.ಅಭಿರಾಮ್ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕ್ಲಬ್ಬಿನ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ನಾಗರಾಜ್. ನೂತನ ಕ್ರೀಡಾ ಸಂಕೀರ್ಣದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಭೂಪಾಳಂ ಶಶಿಧರ್, ಕಾರ್ಯದರ್ಶಿ  ಪ್ರಕಾಶ್ ಉಪಾಧ್ಯಕ್ಷ ಎಚ್ ಜಿ ಅಶೋಕ್. ಜಂಟಿ ಕಾರ್ಯದರ್ಶಿ ಕೆ ಮಂಜುನಾಥ್ ಖಜಾಂಜಿ ಮದನ್ಲಾಲ್ ಸೇರಿದಂತೆ ಕ್ಲಬ್ ನ ಎಲ್ಲಾ ನಿರ್ದೇಶಕರದ ಡಾ.ಸತೀಶ್ ಕುಮಾರ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕ್ಲಬ್ಬಿನ ರಜತ ಮಹೋತ್ಸವದ ಸಂದರ್ಭದಲ್ಲಿ ಕಂಟ್ರಿ ಕ್ಲಬ್ ನ ಅಭಿವೃದ್ಧಿಗಾಗಿ ದುಡಿದ ಹಿರಿಯ ಸದಸ್ಯರು ಮತ್ತು ನಿರ್ದೇಶಕರುಗಳು ಹಾಗೂ ಹಿಂದಿನ ಸಾಲಿನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ…