ಶಿವಮೊಗ್ಗ: ಜಿಲ್ಲಾ ಗೋ ಸೇವಾ ಶಿವಮೊಗ್ಗ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಮತ್ತು ಸುರಭಿ ಗೋಶಾಲೆಯ ಸಹಕಾರದಲ್ಲಿ ಶಿವಮೊಗ್ಗ ಸಮೀಪದ ಮಂಡೇನಕೊಪ್ಪ ಸುರಭಿ ಗೋಶಾಲೆ ಆವರಣದಲ್ಲಿ ಭಾನುವಾರ ಒಂದು ದಿನದ ಗವ್ಯ ಉತ್ಪಾದನೆಗಳ ಪ್ರಶಿಕ್ಷಣ ವರ್ಗವನ್ನು ಆಯೋಜಿಸಿತ್ತು.

ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್, ಆರ್.ಎಸ್.ಎಸ್.ನ ಗತಿವಿಧಿಯ ದಕ್ಷಿಣ ಪ್ರಾಂತ ಸಂಚಾಲಕ ಕಲ್ಲಡ್ಕ ಉಮೇಶ ಕುಲಕರ್ಣ, ಪದಾಧಿಕಾರಿಗಳಾದ ಕಲ್ಪಶ್ರೀ, ರಾಜು ಕೋಟೆ ಮತ್ತಿತರರಿದ್ದರು.ಶಿವಮೊಗ್ಗ ಸೇರಿದಂತೆ ನೆರೆಯ ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ ಮತ್ತಿತರ ಜಿಲ್ಲೆಗಳಿಂದ ಪ್ರಶಿಕ್ಷಣಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…