ವಿಶ್ವ ಕಾರ್ಮಿಕ ದಿನಾಚರಣೆ ಪ್ರಯುಕ್ತ ಕಾರ್ಮಿಕ ಇಲಾಖೆ ಶಿವಮೊಗ್ಗ, ಕರ್ನಾಟಕ, ಸೇವಾ ಸಂಘ (ರಿ) ಬುದ್ಧನಗರ, ಶಿವಮೊಗ್ಗ, ಕರ್ನಾಟಕ, ಸ್ಟೇಟ್ ಕನ್ ಸ್ಟ್ರಕ್ಷನ್ ಯೂನಿಯನ್ (ರಿ) ಮಂಜುನಾಥ ಬಡಾವಣೆ ಶಿವಮೊಗ್ಗ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕ ಸಂಘ (ರಿ) ಬುದ್ಧ ನಗರ, ಶಿವಮೊಗ್ಗ, ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕ ನಿರೀಕ್ಷಕರು ಕಛೇರಿ 1 ಮತ್ತು 2 ವೃತ್ತ ಶಿವಮೊಗ್ಗ ಇವರ ವತಿಯಿಂದ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಭಾಗದ ನೊಂದಾಯಿತ ಮೇಷನ್ ವೃತ್ತಿಯಲ್ಲಿ ತೊಡಗಿರುವ ಸುಮಾರು 465 ಫಲಾನುಭವಿಗಳಿಗೆ ಕೆಲಸದ ಸಾಮಗ್ರಿಗಳು ಟೂಲ್ಸ್ ಕಿಟ್ ವಿತರಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕಿಯಾದ ಶ್ರೀಮತಿ ಸುಖಿತ ಮಾತನಾಡಿ ನೊಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಸೊಸೈಟಿ ಪ್ರಾಜೆಕ್ಟ್ ಡೈರೆಕ್ಟರ್ ಶ್ರೀ ರಘುನಾಥ್ ಭಾಗವಹಿಸಿದರು.ಈ ಸಂದರ್ಭದಲ್ಲಿ ಕರ್ನಾಟಕದ ಸ್ಟೇಟ್ ಕನ್ಸ್ಟ್ರಕ್ಷನ್ ಯೂನಿಯನ್ ಗೌರವಾಧ್ಯಕ್ಷರಾದ ಶ್ರೀ ಕೆ ಇ ಕಾಂತೇಶ್ ಕರ್ನಾಟಕ ಕಟ್ಟಡ ಕಾರ್ಮಿಕರ ಸೇವಾ ಸಂಘ (ರಿ) ಬುದ್ಧನಗರ ಸಂಘದ ಗೌರವ ಅಧ್ಯಕ್ಷರಾದ ಎಮ್ ಭೋಪಾಲ್, ಕಾರ್ಮಿಕ ಮುಖಂಡರಾದ ಆರ್ ವಾಸುದೇವ್. ಭಾಸ್ಕರ್, ಶಕ್ತಿವೇಲು, ಅರುಣ್, ಉಮೇಶ್, ಶಾಂತ, ಸುರೇಂದ್ರ, ಕಚೇರಿ ಡಿ.ಇ.ಒ ಗಳಾದ ಶ್ರೀ ಅಪ್ಸರ್ ಬಾಷಾ, ಶಶಿಕುಮಾರ್, ಶ್ರೀ ಲಕ್ಷ್ಮಿ, ಅನುಪಮ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…