ಶಿವಮೊಗ್ಗ: ನಗರದ ಬಸವ ಕೇಂದ್ರದಲ್ಲಿ ಇಂದು ಬಸವ ಜಯಂತಿಯನ್ನು ಅದ್ದೂರಿಯಾಗಿ
ಆಚರಿಸಲಾಯಿತು.ಬಸವೇಶ್ವರರ ಪುತ್ಥಳಿ ಹಾಗೂ ಬಸವೇಶ್ವರರ ವಚನ ಸಾಹಿತ್ಯದ ಪಲ್ಲಕ್ಕಿ
ಉತ್ಸವ ಮಾಡಲಾಯಿತು.

ಅಂಬಲಿ ಮತ್ತು ಮಜ್ಜಿಗೆಯನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ಪೌರಕಾರ್ಮಿಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.ಸಾನ್ನಿಧ್ಯವನ್ನು ಡಾ. ಶ್ರೀ
ಬಸವಮರುಳಸಿದ್ದ ಸ್ವಾಮೀಜಿ ವಹಿಸಿದ್ದರು.ಈ ಸಂದರ್ಭದಲ್ಲಿ ಬಸವಕೇಂದ್ರ ಸಮಿತಿಯ
ಅಧ್ಯಕ್ಷರು, ಕಾರ್ಯಕಾರಿಣಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…