ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ನೀಡಲಾದ ಮಹಿಳೆಯರಿಗೆ ಹೊಲಿಗೆ ಯಂತ್ರ, ಬಂಡವಾಳ ಹೂಡಿಕೆ ಸಹಾಯಧನ, ಮತ್ತು ಪುರುಷರಿಗೆ ಗಾರೆ, ಬಡಗಿ, ಯಂತ್ರೋಪಕರಣಗಳನ್ನು ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ. ಅಶೋಕ ನಾಯ್ಕ ರವರು ಫಲಾನುಭವಿಗಳಿಗೆ ಹಸ್ತಾಂತರಿಸಿ.

ಶಿವಮೊಗ್ಗ ತಾಲ್ಲೂಕಿನ 19 ಫಲಾನುಭವಿಗಳಿಗೆ ತರಭೇತಿಯನ್ನು ಕೇಂದ್ರದಲ್ಲಿ ತರಭೇತಿ ಕೇಂದ್ರದಲ್ಲಿ ನೀಡಲಾಗಿದೆ.ಹಾಗೂ ಹೊಲಿಗೆ-58, ಗಾರೆ-21, ಬಡಗಿ-20 ಬಂಡವಾಳ ಹೂಡಿಕೆಯ 20 ವೃತ್ತಿಯ ಒಟ್ಟು 128 ಜನ ಫಲಾನುಭವಿಗಳಿಗೆ ಮಾನ್ಯ ಶಾಸಕರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗಣೇಶ್ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರು, ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…