ಭದ್ರಾವತಿ ನ್ಯೂಸ್…

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ 25 ರಂದು ಮಧ್ಯಾಹ್ನ ಶಂಕರಘಟ್ಟ ಗ್ರಾಮದ ವಾಸಿ ಪಾಲಾಕ್ಷಪ್ಪ ಎಂಬ ವ್ಯಕ್ತಿಯು ಮನೆಯಲ್ಲಿ ಯಾವುದೇ ಪರವಾನಿಗೆ ಇಲ್ಲದ ಹಳೆಯ 9 ನಾಡ ಬಂದೂಕುಗಳನ್ನು ಅಕ್ರವಾಗಿ ಇಟ್ಟುಕೊಂಡು ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.

ಸುದ್ದಿ ತಿಳಿದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಗುನ್ನೆ ಸಂಖ್ಯೆ 0108/2022 ಕಲಂ 3, 25(A) ಆಯುಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಂಡು ನಂತರ ಪಿಐ ಭದ್ರಾವತಿ ಗ್ರಾಮಾಂತರ ಠಾಣೆ ಮತ್ತು ಸಿಬ್ಬಂಧಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿ ಪಾಲಾಕ್ಷಪ್ಪ, 47 ವರ್ಷ, ಶಂಕರಘಟ್ಟ, ಭದ್ರಾವತಿ ಈತನನ್ನು ವಶಕ್ಕೆ ಪಡೆದು ಆರೋಪಿತನನಿಂದ ಪರವಾನಿಗೆ ಇಲ್ಲದ ಒಟ್ಟು 09 ಸಂಖ್ಯೆಯ ನಾಡ ಬಂದೂಕುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…