ಶಿವಮೊಗ್ಗ: ಮೇ 29 ರಂದು ಮಧ್ಯಾಹ್ನ ಸಂಜೆ 4 ಗಂಟೆಗೆ  ಶಿವಮೊಗ್ಗ ಗ್ಯಾಸ್ ಹತ್ತಿರ, ಜೈಲ್ ರಸ್ತೆಯಲ್ಲಿರುವ  ದಿನಪತ್ರಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಕಛೇರಿಯಲ್ಲಿ ದಿನಪತ್ರಿಕೆ ವಿತರಕರು ಹಾಗೂ ವಿತರಕರ ಮಕ್ಕಳು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೮೦ ಕ್ಕಿಂತ ಹೆಚ್ಚಿನ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮ ಅಧ್ಯಕ್ಷತೆಯನ್ನು ದಿನಪತ್ರಕೆ ಉಪಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸತ್ಯನಾರಾಯಣ್ ಹೆಚ್.ವಿ. ವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಸಂಘದ ಎಲ್ಲಾ ಸದಸ್ಯರು, ದಿನಪತ್ರಿಕೆ ವಿತರಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಾರ್ಯದರ್ಶಿ ಧನಂಜಯ ಹೆಚ್, ಖಜಾಂಚಿ ಯೊಗೀಶ್ ಪಿ.ಎಸ್. ಕೋರಿದ್ದಾರೆ.ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಂಕರ ಕುದರಿಮೋತಿ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಹಾಗೂ ತಾಲ್ಲೂಕಿನ ವಿತರಕರುಗಳು ಪಾಲ್ಗೊಳ್ಳುವರು.

ವರದಿ ಮಂಜುನಾಥ್ ಶೆಟ್ಟಿ…