ಶಿವಮೊಗ್ಗ ನಗರದ ಚಂಡಿಕಾ ದುರ್ಗಪರಮೇಶ್ವರಿ ದೇವಸ್ಥಾನ, ಸಂಸ್ಕೃತ ಭಾರತಿ, ಮತ್ತು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ವತಿಯಿಂದ ಶ್ರಾವಣಮಾಸ ಮತ್ತು ಸಂಸ್ಕೃತೋತ್ಸವ ಪ್ರಯುಕ್ತ ಸ್ಪರ್ಧೆ ಏರ್ಪಡಿಸಲಾಗಿದೆ.

ಶಂಖನಾದ ಸ್ಪರ್ಧೆಯನ್ನು ದಿನಾಂಕ 18.08.2022 ರ ಗುರುವಾರ ಸಂಜೆ 7.೦೦ ಕ್ಕೆ ಕೋಟೆ ಪೋಲಿಸ್ ಸ್ಟೇಷನ್ ರಸ್ತೆಯಲ್ಲಿರುವ ಚಂಡಿಕಾ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

15 ವರ್ಷ ಮೇಲ್ಪಟ್ಟ ಜಾತಿಮತ ಬೇದವಿಲ್ಲದೆ ಯಾರು ಬೇಕಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ಪ್ರಧಾನ ಅರ್ಚಕರಾದ ವಿದ್ವಾನ್ ಶಂಕರಾನಂದ ಜೋಯಿಸ್, ದೂರವಾಣಿ 9448525103, ಇವರಲ್ಲಿ ನೋಂದಾಯಿಸಬಹುದೆಂದು ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹಮೂರ್ತಿ ಕೋರಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…