ಶಿವಮೊಗ್ಗ ನಗರದಲ್ಲಿ ಆಟೋದಲ್ಲಿ 40ಗ್ರಾಂ ಬೆಲೆ ಬಾಳುವ ಲಕ್ಷಾಂತರ ರೂಪಾಯಿ ಚಿನ್ನವನ್ನು ಬಿಟ್ಟು ಹೋದ ಮಹಿಳೆಗೆ ಆಟೋ ಚಾಲಕ ಮಹಮ್ಮದ್ ಗೌಸ್ ಬಂಗಾರ ವಾಪಸ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಟಿಪ್ಪು ನಗರದ ದಿನಾಂಕ 10ರಂದು ಮಹಿಳೆಯೊಬ್ಬರು ಬಸ್ಟಾಂಡ್ ಹತ್ತಿರ ಆಟೋವನ್ನು ಹತ್ತಿ ಟಿಪ್ಪು ನಗರದಲ್ಲಿ ಮನೆ ಹತ್ತಿರ ಇಳಿಯುವಾಗ ಬಂಗಾರದ ಬ್ಯಾಗನ್ನು ಆಟೋದಲ್ಲಿ ಬಿಟ್ಟು ಹೋಗಿದ್ದಾರೆ.
ನಂತರ ಆಟೋ ಚಾಲಕ ಮಹಮ್ಮದ್ ಗೌಸ್ ಆ ಬ್ಯಾಗನ್ನು ಮಹಿಳೆಗೆ ಹಿಂತಿರುಗಿಸುವ ಮೂಲಕ ಮಾನವೀಯತೆಯನ್ನು ಮರೆದಿದ್ದಾರೆ.ಶಿವಮೊಗ್ಗ ಎಸ್.ಪಿ ಲಕ್ಷ್ಮಿ ಪ್ರಸಾದ್ ರವರು ಆಟೋ ಚಾಲಕನಿಗೆ ಸನ್ಮಾನಿಸಿದರು. ಸಂಚಾರಿ ಸರ್ಕಲ್ ಇನ್ಸ್ಪೆಕ್ಟರ್ ಆದ ಸಂತೋಷ ರವರು ಚಾಲಕನಿಗೆ ಅಭಿನಂದಿಸಿದರು.ಜೊತೆಗೆ ಆಟೋ ಚಾಲಕ ಮೊಹಮ್ಮದ್ ಗೌಸಿಗೆ ಸಾರ್ವಜನಿಕರು ಪ್ರಶಾಂತಿಸಿದ್ದಾರೆ.

ವರದಿ ಪ್ರಜಾಶಕ್ತಿ…