BREAKING NEWS…

ಶಿವಮೊಗ್ಗ ನಗರದ ಹೃದಯ ಭಾಗವಾದ ಬಸ್ ಸ್ಟ್ಯಾಂಡ್ ಸಮೀಪ ತೀರ್ಥಹಳ್ಳಿ ರಸ್ತೆ ಅರಸು ವೆಜ್ ಮುಂಭಾಗದಲ್ಲಿ ಡಿವೈಡರ್ ಇದ್ದು ಇಲ್ಲಿ ಸೂಕ್ತ ರಿಫ್ಲೆಕ್ಟರ್ ಗಳು ಇಲ್ಲದಿರುವುದರಿಂದ ಪದೇ ಪದೆ ಅಪಘಾತಗಳಾಗುತ್ತಿದ್ದು.

ಇಂದು ಮಾರುತಿ ಸ್ವಿಫ್ಟ್ ಡಿಸೈರ್ ಕಾರೊಂದು ಡಿವೈಡರ್ಗೆ ಡಿಕ್ಕಿಯಾಗಿದೆ. ಡಿಕ್ಕಿಯಿಂದಾಗಿ ಏರ್ ಬ್ಯಾಗ್ ಗಳು ಓಪನ್ ಆಗಿದ್ದು. ಏರ್ ಬ್ಯಾಗ್ ನಿಂದಾಗಿ ಪ್ರಯಾಣಿಕರಿಗೆ ಹೆಚ್ಚಿನ ಗಾಯಗಳಾಗಿಲ್ಲ .
ಡಿವೈಡರ್ ಗೆ ಸೂಕ್ತ ರಿಫ್ಲೆಕ್ಟರ್ ಗಳನ್ನು ಅಳವಡಿಸಿದರೆ ಪದೇಪದೇ ಇಂಥ ಅನಾಹುತಗಳು ಆಗುವುದಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ.

ಇನ್ನಾದರೂ ಸಂಬಂಧಪಟ್ಟ ವ್ಯಕ್ತಿಗಳಿಗೆ ಸೂಕ್ತ ಡಿವೈಡರ್ ಗಳಿಗೆ ರಿಫ್ಲೆಕ್ಟರನ್ನು ಅಳವಡಿಸಲು ಮನಸ್ಸಾಗುವುದೇ ಕಾದು ನೋಡಬೇಕು.

ವರದಿ ಪ್ರಜಾಶಕ್ತಿ…