ಶಿವಮೊಗ್ಗ: ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನ ಶಿವಮೊಗ್ಗ ಭಾವನಾ ಮಾಸಿಕ ಸಭೆಯು  ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನೆರವೇರಿತು. 

ಸೀನಿಯರ್ ಎಸ್.ವಿ. ಶಾಸ್ತ್ರಿ ಕಾರ್ಯಕ್ರಮ  ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀನಿಯರ್ ಪುಷ್ಪ. ಎಸ್. ಶೆಟ್ಟಿ 2023-24 ರ ಅವಧಿಗೆ  ಪದಾಧಿಕಾರಿಗಳನ್ನು ಘೋಷಿಸಿದರು. ಕಾರ್ಯದರ್ಶಿ ಸೀನಿಯರ್ ಸುರೇಖಾ ಮುರಳೀಧರ್ ಅವರು ರಾಷ್ಟ್ರೀಯ ಸಮ್ಮೇಳನದಲ್ಲಿ ಭಾವನಕ್ಕೆ ಬಂದಂತಹ ಪ್ರಶಸ್ತಿ ಪುರಸ್ಕಾರಗಳ ಮಾಹಿತಿ ನೀಡಿದರು.

ರಾಷ್ಟ್ರೀಯ ನಿರ್ದೇಶಕ ಸೀನಿಯರ್ ಜಯೇಶ್ ಅವರು ಸಂಸ್ಥೆಯ ಹುಟ್ಟು, ಸಾಗಿ ಬಂದ ದಾರಿ ವಿವರಿಸಿದರು.

ಸೀನಿಯರ್ ಶ್ರೀಮತಿ ವಾತ್ಸಲ್ಯ ಸತೀಶ್ ಶೆಟ್ಟಿ ರವರ ಮಾರ್ಗದರ್ಶನದಲ್ಲಿ ನೈದಿಲೆ ತಂಡ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟಿತು. ಶಿವಮೊಗ್ಗ ಭರವಸೆಯ ಅಧ್ಯಕ್ಷ ಸೀನಿಯರ್ ರಮೇಶ್ ಬಾಬು,  ಕಾರ್ಯಕಾರಿ ಮಂಡಳಿಯ ಸದಸ್ಯರು, ಪೂರ್ವ ಅಧ್ಯಕ್ಷರು,  ಸಮಸ್ತ ಸದಸ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…